ಭಕ್ತಕೋಡಿ ಹಾಲು ಉತ್ಪಾದಕರ ಸಹಕಾರ ಸಂಘದ ಮಹಾಸಭೆ

0

2,89,392 ರೂ. ನಿವ್ವಲ ಲಾಭ; 16% ಡಿವಿಡೆಂಡ್, ಲೀ.ಗೆ 60 ಪೈಸೆ ಬೋನಸ್

ಪುತ್ತೂರು: ಭಕ್ತಕೋಡಿ ಹಾಲು ಉತ್ಪಾದಕರ ಸಹಕಾರ ಸಂಘವು 2024-25ನೇ ಸಾಲಿನಲ್ಲಿ 36930217.54ರೂ.ಗಳ ವ್ಯವಹಾರ ಮಾಡಿದ್ದು, ಸುಮಾರು 145 ಸಕ್ರಿಯ ಸದಸ್ಯರುಗಳು 82,28,496.30ಗಳ 2,28,876.9 ಲೀಟರ್ ಹಾಲನ್ನು ಖರೀದಿಸಿ 4,51,248.00 ರೂ.ಗಳ 9401 ಲೀಟರ್ ಹಾಲನ್ನು ಸ್ಥಳೀಯವಾಗಿ ಸಂಘದಿಂದ ಮಾರಾಟ ಮಾಡಲಾಗಿದೆ. ಹಾಗೂ 9401 ರೂ.ಗಳ 2,26,940ಕೆ.ಜಿ ಹಾಲನ್ನು ದ.ಕ ಹಾಲು ಒಕ್ಕೂಟಕ್ಕೆ ಮಾರಾಟ ಮಾಡಲಾಗಿದೆ. ವರದಿ ಸಾಲಿನಲ್ಲಿ ಸಂಘವು 2,89,392 ರೂ. ನಿವ್ವಲ ಲಾಭ ಗಳಿಸಿದ್ದು ಸದಸ್ಯರಿಗೆ 16% ಡಿವಿಡೆಂಡ್ ಹಾಗೂ ಪ್ರತೀ ಲೀಟರಿಗೆ 16% ಪೈಸೆ ಬೋನಸ್ ನೀಡಲಾಗುವುದು ಎಂದು ಸಂಘದ ಅಧ್ಯಕ್ಷ ಸುರೇಶ್ ಕುಮಾರ್ ಸೊರಕೆ ಹೇಳಿದರು. ಆ.20ರಂದು ಭಕ್ತಕೋಡಿಯಲ್ಲಿ ಸಂಘದ ವಠಾರದಲ್ಲಿ ನಡೆದ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.


ಕೃಷಿ ಕ್ಷೇತ್ರಕ್ಕೆ ಹೈನುಗಾರಿಕೆ ಕೊಡುಗೆ ಅಪಾರವಾಗಿದ್ದು ಹೈನುಗಾರಿಕೆ ಇಲ್ಲದೇ ಕೃಷಿ ಚಟುವಟಿಕೆ ನಡೆಸಲು ಅಸಾಧ್ಯ ಎಂದು ಅವರು ಹೇಳಿದರು. ನಮ್ಮ ಸಂಘವು ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು ಸದಸ್ಯರು ಉತ್ತಮ ಸಹಕಾರ ನೀಡುತ್ತಿದ್ದಾರೆ. ಒಕ್ಕೂಟದಿಂದ ಕೂಡಾ ಉತ್ತಮ ಸಹಕಾರ ಸಿಗುತ್ತಿದೆ, ಮುಂದಕ್ಕೂ ನಿಮ್ಮೆಲ್ಲರ ಸಹಕಾರದಿಂದ ಸಂಘವನ್ನು ಇನ್ನಷ್ಟು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಲಾಗುವುದು ಎಂದು ಸುರೇಶ್ ಕುಮಾರ್ ಸೊರಕೆ ಹೇಳಿದರು. ದ.ಕ ಕನ್ನಡ ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಶ್ರೀದೇವಿ ಅವರು ಒಕ್ಕೂಟದಿಂದ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು.

ಬೆಳಗ್ಗಿನ ಸಮಯ ವಿಸ್ತರಣೆಗೆ ಆಗ್ರಹ:
ಭಕ್ತಕೋಡಿ ಹಾಲು ಉ.ಸ.ಸಂಘದಲ್ಲಿ ಬೆಳಗ್ಗಿನ ಹೊತ್ತು ಹಾಲು ಖರೀದಿ ಪ್ರಕ್ರಿಯೆ 7.35ಕ್ಕೆ ಮುಕ್ತಾಯಗೊಳ್ಳುತ್ತಿದ್ದು ಅದನ್ನು 8 ಗಂಟೆ ವರೆಗೆ ವಿಸ್ತರಿಸಬೇಕೆಂದು ಸದಸ್ಯರು ಆಗ್ರಹಿಸಿದರು.

ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಬೆಳಿಯಪ್ಪ ಗೌಡ ಕೆ.ಎಂ, ನಿರ್ದೇಶಕರಾದ ವಿಶ್ವನಾಥ ರೈ ಬಿ, ಸುಧೀರ್‌ಕೃಷ್ಣ ಎಂ.ಪಿ, ಗುಣಪಾಲ ಗೌಡ, ಯಶೋಧರ ರೈ, ಗೀತಾ ಎಂ, ಕವಿತಾ ಕೆ, ಕೊರಗಪ್ಪ ಬಿ, ಐತ್ತಪ್ಪ ನಾಯ್ಕ, ಶಶಿಧರ ಎಸ್.ಡಿ, ಯತೀಶ್ ರೈ ಮೇಗಿನಗುತ್ತು ಉಪಸ್ಥಿತರಿದ್ದರು. ನಿರ್ದೇಶಕಿ ಗೀತಾ ಮರಿಯ ಪ್ರಾರ್ಥಿಸಿದರು.

ನಿರ್ದೇಶಕ ಸುಧೀರ್ ಕೃಷ್ಣ ಎಂ.ಪಿ ಸ್ವಾಗತಿಸಿದರು. ಸಂಘದ ಕಾರ್ಯದರ್ಶಿ ಪ್ರಪುಲ್ಲನಾಥ ರೈ ವರದಿ ವಾಚಿಸಿದರು. ನಿರ್ದೇಶಕ ಶಶಿಧರ ಎಸ್.ಡಿ ವಂದಿಸಿದರು. ಸಂಘದ ಹಾಲು ಪರೀಕ್ಷಕ ಐತ್ತಪ್ಪ ಪಿ ಸಹಕರಿಸಿದರು. ಸಭೆಯಲ್ಲಿ ಸಂಘದ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here