ಕಡಬ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ವತಿಯಿಂದ ಕಡಬ ಸರಸ್ವತೀ ವಿದ್ಯಾಲಯದಲ್ಲಿ ನಡೆದ ಪುತ್ತೂರು ತಾಲೂಕು ಮಟ್ಟದ ಕರಾಟೆ ಸ್ಪರ್ಧೆಯಲ್ಲಿ 17ರ ವಯೋಮಾನದ 35 ಕೆ.ಜಿ ಹುಡುಗರ ವಿಭಾಗದಲ್ಲಿ ಸರಸ್ವತೀ ವಿದ್ಯಾಲಯ ಪ್ರೌಢಶಾಲೆಯ 9ನೇ ತರಗತಿಯ ಲೋಹಿತ್ ಕುಮಾರ್ ಪ್ರಥಮ ಸ್ಥಾನ ಹಾಗೂ 45 ಕೆ.ಜಿ ಹುಡುಗರ ವಿಭಾಗದಲ್ಲಿ 10ನೇ ತರಗತಿಯ ಚಿಂತನ್.ಕೆ. ಪ್ರಥಮ ಸ್ಥಾನವನ್ನು ಪಡೆದು ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ.

17ರ ವಯೋಮಾನದ ಹುಡುಗಿಯರ 33 ಕೆ.ಜಿ ವಿಭಾಗದಲ್ಲಿ 9ನೇ ತರಗತಿಯ ಕೀರ್ತಿ ಜೆ.ರೈ ದ್ವಿತೀಯ ಸ್ಥಾನ, 78 ಕೆ.ಜಿ ವಿಭಾಗದಲ್ಲಿ 9ನೇ ತರಗತಿಯ ಶಶಾಂಕ್ ಡಿ ದ್ವಿತೀಯ ಹಾಗೂ 50 ಕೆ.ಜಿ ವಿಭಾಗದ ಸ್ಪರ್ಧೆಯಲ್ಲಿ 9ನೇ ತರಗತಿಯ ಪವನ್ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾರೆ. ಇವರಿಗೆ ಕರಾಟೆ ಶಿಕ್ಷಕರಾದ ಯಾದವ ಬೀರಂತಡ್ಕ ಹಾಗೂ ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕ ಲಕ್ಷ್ಮೀಶ ಗೌಡ ಆರಿಗ ತರಬೇತಿ ನೀಡಿರುತ್ತಾರೆ.