




ಕಾಣಿಯೂರು: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ಉಪ ನಿರ್ದೇಶಕರ ಕಛೇರಿ ದ.ಕ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಮಂಗಳೂರು ದಕ್ಷಿಣ ವಲಯ ಹಾಗೂ ಪಿಎಂಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಉಚ್ಚಿಲಗುಡ್ಡೆ, ಸೋಮೇಶ್ವರ ಇದರ ಸಹಯೋಗದೊಂದಿಗೆ ಕಿಯಾಂಝ ಗಾರ್ಡನ್ ಉಚ್ಚಿಲಗುಡ್ಡೆಯಲ್ಲಿ ನಡೆದ 14ರ ವಯೋಮಾನದ ಬಾಲಕರ ಕರಾಟೆ ಪಂದ್ಯಾಟದಲ್ಲಿ ಪ್ರಗತಿ ವಿದ್ಯಾ ಸಂಸ್ಥೆಯ 8ನೇ ತರಗತಿ ವಿದ್ಯಾರ್ಥಿ ಸಮನ್ಯು ರೈ ದ್ವಿತೀಯ ಸ್ಥಾನ ಪಡೆದುಕೊಂಡಿರುತ್ತಾರೆ. ಇವರು ಸುಳ್ಯ ತಾಲೂಕು ಕೊಡಿಯಾಲ ಗ್ರಾಮದ ಕಲ್ಲಗದ್ದೆ ಸುದೇಶ್ ರೈ ಮತ್ತು ಪ್ರಮೀಳ ದಂಪತಿಗಳ ಪುತ್ರ. ಇವರಿಗೆ ಸಂಸ್ಥೆಯ ಕರಾಟೆ ಮಾಸ್ಟರ್ ದಿನೇಶ್ ಮುರುಳ್ಯ ತರಬೇತು ನೀಡಿರುತ್ತಾರೆ. ಶಿಕ್ಷಕಿ ಧನ್ಯ ಎಂ ಕೆ ಮತ್ತು ಪೋಷಕಬಂಧು ಕೇರ್ಪಡ ಧ್ರುವಕುಮಾರ್ ಸಹಕರಿಸಿದರು.















