





ಪುತ್ತೂರು: ಶಾಂತಿಗೋಡು ಗ್ರಾಮದ ನರಿಮೊಗರು ಗ್ರಾಮ ಪಂಚಾಯತ್ ವ್ಯಾಪ್ತಿಯ ಆನಡ್ಕ-ಅಜ್ಜಿಕಲ್ಲು ರಸ್ತೆ ಬದಿಯ ಚರಂಡಿಯಲ್ಲಿಯೇ ಪೈಪ್ಲೈನ್ ಕಾಮಗಾರಿಯಲ್ಲಿ ಪೈಪ್ ಅಳವಡಿಸಿದ ಪರಿಣಾಮ ವಾಹನ ಸವಾರರಿಗೆ ಸಂಕಷ್ಟ ಎದುರಾಗಿದೆ.



ಆನಡ್ಕ-ಅಜ್ಜಿಕಲ್ಲು ರಸ್ತೆಯಲ್ಲಿ ಸಾರ್ವಜನಿಕರು, ಶಾಲಾ ಮಕ್ಕಳು ಹೋಗುತ್ತಿರುತ್ತಾರೆ. ಜಲಜೀವನ್ ಮಿಷನ್ ಕಾಮಗಾರಿಯಲ್ಲಿ ಈ ರಸ್ತೆಯ ಚರಂಡಿಯಲ್ಲಿ ಅಳವಡಿಸಿದ ಪೈಪ್ಲೈನ್ ಕಾಮಗಾರಿಯಿಂದ ಅಪಾಯವನ್ನು ಆಹ್ವಾನಿಸಿದಂತಾಗಿದೆ. ಆದುದರಿಂದ ಚರಂಡಿಯಲ್ಲಿ ಅಳವಡಿಸಲಾದ ಪೈಪ್ಲೈನ್ನ ಮೇಲೆ ಮಣ್ಣು ಹಾಕಿ ಮುಚ್ಚಬೇಕಾಗಿ ಸ್ಥಳೀಯರು ಆಗ್ರಹಿಸಿದ್ದಾರೆ. ಈ ರಸ್ತೆಯಲ್ಲಿ ಅಂಗನವಾಡಿ ಪುಟ್ಟ ಮಕ್ಕಳು, ವಾಹನ ಸವಾರರು, ಸಾರ್ವಜನಿಕರು ಸಂಚರಿಸುತ್ತಿದ್ದು ಈ ರಸ್ತೆ ಪೇಟೆಯನ್ನು ಸಂಪರ್ಕಿಸುವ ರಸ್ತೆಯಾಗಿದೆ.










