ಓಡಿಲ್ನಾಳ: ಕಿರಾತ ಮೂರ್ತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ದಾರದ ಕಾರ್ಯಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರು 2ನೇ ಕಂತು 2 ಲಕ್ಷ ಗುರುವಾಯನಕೆರೆ ವಲಯದ ಯೋಜನಾಧಿಕಾರಿ ಯಶವಂತ್ ಇವರ ಮುಖಾಂತರ ಓಡಿಲ್ನಾಳ ಧರ್ಮೋಥಾನ ಟ್ರಸ್ಟ್ ಇದರ ಅಧ್ಯಕ್ಷರಾದ ಪಿ ವೃಷಭ ಆರಿಗ ಮತ್ತು ಜೀರ್ಣೋದ್ದಾರ ಸಮಿತಿ ಕಾರ್ಯಧ್ಯಕ್ಷರಾದ ಎಸ್ ಜಯರಾಮ್ ಶೆಟ್ಟಿ ಯವರಿಗೆ ಹಸ್ತಾಂತರಿಸಿದರು.
ಈ ಸಂಧರ್ಭದಲ್ಲಿ ಮಡಂತ್ಯಾರು ವಲಯ ಮೇಲ್ವಿಚಾರಕ ಪಿ ಶೇಖರ್,ಗುರುವಾಯನಕೆರೆ ವಲಯ ಮೇಲ್ವಿಚಾರಕ ಅಚ್ಚುತ, ಕಟ್ಟದಬೈಲು ಒಕ್ಕೂಟದ ಅಧ್ಯಕ್ಷ ಬಾಲಕೃಷ್ಣ ಬನ, ಓಡಿಲ್ನಾಳ ಒಕ್ಕೂಟದ ಉಪಾಧ್ಯಕ್ಷರು ಬಾಬು ಶೆಟ್ಟಿ, ಕಟ್ಟಡಬೈಲು ಒಕ್ಕೂಟದ ಸೇವಾ ಪ್ರತಿನಿಧಿ ಸುಮಿತ್ರಾ, ಓಡಿಲ್ನಾಳ ಒಕ್ಕೂಟದ ಸೇವಾ ಪ್ರತಿನಿಧಿ ಅನುಷಾ ಜೀರ್ಣೋದ್ದಾರ ಸಮಿತಿ ಪ್ರಧಾನ ಕಾರ್ಯದರ್ಶಿ ಚಂದ್ರಹಾಸ ಕೇದೆ, ಕೋಶಾಧಿಕಾರಿ ಗೋಪಾಲ ಶೆಟ್ಟಿ ಕೋರ್ಯಾರು, ಓಡಿಲ್ನಾಳ ಧರ್ಮೋಥಾನ ಟ್ರಸ್ಟಿನ ಸದಸ್ಯರಾದ ದಿನೇಶ್ ಮೂಲ್ಯ ಕೊಂಡೆಮಾರು, ಸತೀಶ್ ಪೊಕ್ಕಿ, ದೇವಸ್ಥಾನದ ಸೇವಾರ್ಥಿ ಶ್ರೀ ಮೋಹನ ಶೆಟ್ಟಿ ಕೆರೆಕಜೆ ಮತ್ತು ಗುತ್ತಿಗೆದಾರ ಮೋಹನ ನಾಯ್ಕ ಭದ್ರಕಜೆ ಉಪಸ್ಥಿತರಿದ್ದರು.