ಉಪ್ಪಿನಂಗಡಿ: ಇಸ್ಲಾಮಿಕ್ ಸೆಂಟರ್ ನಲ್ಲಿ ಕಾರ್ಯಾಚರಿಸುತ್ತಿರುವ ಮಾಲಿಕುದ್ದಿನಾರ್ ಮಹಿಳಾ ಶರೀಅತ್ ಕಾಲೇಜು (ಶರೀಅತ್,ಪಿ.ಯು.ಸಿ,) ಇದರ ಪ್ರಾರಂಭೋತ್ಸವವು ದಿನಾಂಕ 19-06-2019 ಬುಧವಾರ ನಾಳೆ ಬೆಳಿಗ್ಗೆ 10:00 ಕ್ಕೆ ನಡೆಯಲಿದೆ.
ಬಹು|ಅಸ್ಸಯ್ಯದ್ ಅನಸ್ ತಂಙಳ್ ಅಲ್ ಹಾದಿ ಗಂಡಿಬಾಗಿಲು ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದು ಮಾಲಿಕುದ್ದಿನಾರ್ ಕೇಂದ್ರ ಜುಮಾ ಮಸೀದಿ ಅಧ್ಯಕ್ಷರಾದ ಜ|ಮುಸ್ತಫಾ ಮಾಜಿ ಕೆಂಪಿ ಅಧ್ಯಕ್ಷತೆ ವಹಿಸಲಿದ್ದಾರೆ. ಎಸ್ ಬಿ ಮುಹಮ್ಮದ್ ದಾರಿಮಿ ಮುಖ್ಯ ಅಥಿತಿಯಾಗಿ ಭಾಗವಹಿಸಲಿದ್ದಾರೆ. ಪ್ರಾಂಶುಪಾಲರಾದ ನಝೀರ್ ಅಝ್ಹರಿ ಬೊಳ್ಮಿನಾರ್ ಮತ್ತು ಪ್ರಾಧ್ಯಪಕರಾದ ಇಬ್ರಾಹಿಂ ಬಾತಿಷ್ ಅಝ್ಹರಿ ಹಿತವಚನ ನೀಡಲಿದ್ದಾರೆ.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾಲಿಕುದಿನಾರ್ ಆಡಳಿತ ಸಮೀತಿಯ ಪಧಾದಿಕಾರಿಗಳು, ಹಲವಾರು ಉಲಮಾಗಳು ಸಾಮಾಜಿಕ ಧಾರ್ಮಿಕ ಮುಖಂಡರು ಭಾಗವಹಿಸಲಿದ್ದಾರೆ ಎಂದು ಸಂಸ್ಥೆಯ ಸಂಚಾಲಕರಾದ ಹಾಜಿ ಅಶ್ರಫ್ ಸಿಟಿ ತಿಳಿಸಿದ್ದಾರೆ. ಧಾರ್ಮಿಕ ಶಿಕ್ಷಣದೊಂದಿಗೆ ಲೌಕಿಕವಾಗಿ ಪಿಯುಸಿ ಶಿಕ್ಷಣವನ್ನು ನೀಡುವ ಉಧ್ಧೇಶದೊಂದಿಗೆ ಪ್ರಾರಂಭವಾದ ಈ ಸಂಸ್ಥೆಯು ಈಗಾಗಲೇ ಒಂದು ವರ್ಷ ಪೂರೈಸಿದೆ.ಸಮರ್ಥ ಧಾರ್ಮಿಕ ಉಲಮಾಗಳ ನೇತ್ರತ್ವದಲ್ಲಿ ನಡೆಯುತ್ತಿರುವ ಸಂಸ್ಥೆಯಲ್ಲಿ ತರಬೇತಿ ಪಡೆದ ಶಿಕ್ಷಕ ಶಿಕ್ಷಕಿಯರು ತರಗತಿ ನಡೆಸಲಿದ್ದಾರೆ.ಆಸಕ್ತ ವಿಧ್ಯಾರ್ಥಿಗಳು ಕೂಡಲೆ ಸಂಪರ್ಕಿಸಿ ದಾಖಲಾತಿ ಪಡೆಯಬಹುದಾಗಿದೆ ಎಂದು ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ.