ಮಣಿಮಜಲು ಬೈದೇರುಗಳ ಗರಡಿಯ ಮುಖ್ಯಸ್ಥ ಕೃಷ್ಣಪ್ಪ ಪೂಜಾರಿ ನಿಧನ

0

 

ಕಳಂಜ ಗ್ರಾಮದ ಮಣಿಮಜಲು ಶ್ರೀ ಬ್ರಹ್ಮ ಬೈದೇರುಗಳ ಗರಡಿಯ ಆಡಳಿತ ಮೊಕ್ತೇಸರರೂ, ಕುಟುಂಬದ ಹಿರಿಯರೂ ಆದ ಕೃಷ್ಣಪ್ಪ ಪೂಜಾರಿ ಮಣಿಮಜಲು ಸೆ. 1ರಂದು ಸ್ವ ಗೃಹದಲ್ಲಿ ನಿಧನರಾದರು. ಇವರಿಗೆ 81 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಶ್ರೀಮತಿ ಗಿರಿಜಾ, ಪುತ್ರರಾದ ಚಂದ್ರಶೇಖರ ಪೂಜಾರಿ ಮಣಿಮಜಲು, ವಸಂತ ಪೂಜಾರಿ ಮಣಿಮಜಲು, ಸದಾಶಿವ ಪೂಜಾರಿ ಮಣಿಮಜಲು, ಲೋಕೇಶ್ ಪೂಜಾರಿ ಮಣಿಮಜಲು, ಪುತ್ರಿ ಶ್ರೀಮತಿ ರಾಜೀವಿ ಕೃಷ್ಣಪ್ಪ ಪೂಜಾರಿ ಮರಿಯ, ಸರ್ವೆ, ಸಹೋದರ ನಾರಾಯಣ ಪೂಜಾರಿ ಮಣಿಮಜಲು, ಸಹೋದರಿಯರಾದ ಶ್ರೀಮತಿ ನೀಲಮ್ಮ ಅನಂತಾಡಿ, ಶ್ರೀಮತಿ ಸುಶೀಲಾ ಈಶ್ವರಮಂಗಲ ಸೇರಿದಂತೆ ಸೊಸೆಯಂದಿರು, ಅಳಿಯ, ಮೊಮ್ಮಕ್ಕಳು, ಕುಟುಂಬಸ್ಥರು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here