ಪುತ್ತೂರು: ಪೆರ್ನೆ-ಬಿಳಿಯೂರು ಗ್ರಾಮದ ತಿಪ್ಪಕೋಡಿ ಬಾಲಕೃಷ್ಣ ರೈಯವರ ಮನೆಯಲ್ಲಿ 25ನೇ ವರ್ಷದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಯಿಂದ ಜ:22 ರಂದು ಶ್ರೀ ದೇವಿ ಮಹಾತ್ಮೆಯ ಯಕ್ಷಗಾನ ಬಯಲಾಟ ನಡೆಯಿತು.ಮಧ್ಯಾಹ್ನ ಶ್ರೀ ಮಹಾವಿಷ್ಣು ಭಜನಾ ಮಂಡಳಿ ಬಿಳಿಯೂರು ಇವರಿಂದ ಭಜನಾ ಕಾರ್ಯಕ್ರಮ ಜರುಗಿತು. ರಾತ್ರಿ ಶ್ರೀ ದೇವಿಗೆ ಮಹಾಪೂಜೆ ನಡೆದು ಬಳಿಕ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಿತು. ತಿಪ್ಪಕೋಡಿ ಬಾಲಕೃಷ್ಣ ರೈ ದಂಪತಿಗಳು ಮತ್ತು ಸಹೋದರರು ಭಕ್ತಾದಿಗಳನ್ನು ಸ್ವಾಗತಿಸಿದರು.