- ಜ.29: ಅನ್ನಪೂರ್ಣೇಶ್ವರಿ ಅನ್ನಚತ್ರ ಲೋಕಾರ್ಪಣೆ
ವಿಟ್ಲ: ಬಂಟ್ವಾಳ ತಾಲೂಕಿನ ಅನಂತಾಡಿ ಶ್ರೀ ಉಳ್ಳಾಲ್ತಿ ವೈದ್ಯನಾಥೇಶ್ವರ, ಹೊಸಮ್ಮ, ಶ್ರೀ ಬ್ರಹ್ಮಬೈದರ್ಕಳ ಗರಡಿ, ಅಣ್ಣಪ್ಪ ಪಂಜುರ್ಲಿ ಪರಿವಾರ ದೈವಗಳ ಕ್ಷೇತ್ರ ಬಾಕಿಲಗುತ್ತುವಿನಲ್ಲಿ ಜ.೩೧ರಂದು ಫೆ.೩ರ ವರೆಗೆ ನಡೆಯಲಿರುವ ಪ್ರತಿಷ್ಠಾದಿನಾಚರಣೆ ಹಾಗೂ ನೇಮೋತ್ಸವದ ಪ್ರಯುಕ್ತ ಜ.೨೫ರಂದು ಬೆಳಗ್ಗೆ ಗೊನೆಮುಹೂರ್ತ ನಡೆಯಿತು. ಬಳಿಕ ಬಾಕಿಲ್ತಿಮಾರ್ ನಾಗಬನದಲ್ಲಿ ಪವಮಾನ ಕಲಶ ಮತ್ತು ಆಶ್ಲೇಷ ಬಲಿ, ಕಲಶಾಭಿಷೇಕ ನಡೆಯಿತು.
ಬಾಕಿಲ ಗುತ್ತು ಆಡಳಿತ ಟ್ರಸ್ಟ್ ನ ಅಧ್ಯಕ್ಷರಾದ ವಸಂತ ಪೂಜಾರಿ ಎ. ಮಂಗಳೂರು, ಪ್ರಧಾನ ಕಾರ್ಯದರ್ಶಿ ಹರೀಶ್ ಸಾಲ್ಯಾನ್ ಮಂಗಳೂರು, ಕೋಶಾಧಿಕಾರಿ ಲಕ್ಷ್ಮಣ ಪೂಜಾರಿ ಬಾಕಿಲಗುತ್ತು, ಜತೆಕಾರ್ಯದರ್ಶಿ ಸಂಕಪ್ಪ ಪೂಜಾರಿ ಮಾಡಾವು, ಟ್ರಸ್ಟಿಗಳಾದ ಜನಾರ್ಧನ ಪೂಜಾರಿ ಬಾಕಿಲ, ಪುಷ್ಪಾ ಬಾಕಿಲ, ಸುರೇಶ್ ಸಾಲಿಯಾನ್ ಬಾಕಿಲ , ಶೈಲೇಶ್ ಕುಮಾರ್ ಅಗತ್ತಾಡಿ ಚಂದ್ರಶೇಖರ ಗೋಳಿಕಟ್ಟೆ, ವಾರಿಜಾ ವಸಂತ ಸುವರ್ಣ ಕೆಂಗುಡೇಲು, ಗರಡಿ ಅರ್ಚಕರಾದ ಕೃಷ್ಣ ಶಾಂತಿ ಪಾಣೇರ ಮಜಲು, ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಅನ್ನಪೂರ್ಣೇಶ್ವರಿ ಅನ್ನಚತ್ರ ಲೋಕಾರ್ಪಣೆ:
ಕ್ಷೇತ್ರದಲ್ಲಿ ನೂತನವಾಗಿ ನಿರ್ಮಿಸಲಾದ ಅನ್ನಪೂರ್ಣೇಶ್ವರಿ ಅನ್ನಛತ್ರದ ಲೋಕಾರ್ಪಣೆ ಕಾರ್ಯಕ್ರಮವು ಜ.೨೯ರಂದು ನಡೆಯಲಿದೆ. ಬೆಳಿಗ್ಗೆ ಅನ್ನಛತ್ರದಲ್ಲಿ ಮಹಾಗಣಪತಿ ಹವನ, ನಾಗಬನದಲ್ಲಿ ಗಣಪತಿಹವನ, ನವಕಲಶಾಭಿಷೇಕ, ಪಂಚಾಮೃತ, ರಕ್ತೇಶ್ವರಿಗೆ ತಂಬಿಲ ಸೇವೆ, ಗುಳಿಗ ಅಮ್ನೂರು ಭೈರವ ಸನ್ನಿಧಿಯಲ್ಲಿ ಕಲಶಸೇವೆ, ಅನ್ನಸಂತರ್ಪಣೆ ನಡೆಯಲಿದೆ. ಜ.೩೦ರಿಂದ ಪ್ರತಿಷ್ಠಾವರ್ಧಂತಿ ಹಾಗೂ ವಾರ್ಷಿಕ ನೇಮೋತ್ಸವ ನಡೆಯಲಿದೆ.