ಯಕ್ಷಪ್ರತಿಭೆ ಮಾ. ಚಿತ್ತರಂಜನ್ ಗೆ  ಆದಿಗ್ರಾಮೋತ್ಸವ ಬಾಲ ಸಿರಿ ಪ್ರಶಸ್ತಿ

0

ಪುತ್ತೂರು :   ಕಾರ್ಕಳ ಅಜೆಕ್ಕಾರಿನಲ್ಲಿ ಜ.26 ರಂದು ನಡೆದ “ಆದಿಗ್ರಾಮೋತ್ಸವ 2022 ” ಕಾರ್ಯಕ್ರಮದಲ್ಲಿ ಬಾಲ ಯಕ್ಷಪ್ರತಿಭೆ  ಪಾಣಾಜೆ ಗ್ರಾಮದ ಕಡಂದೇಲು  ಮಾ.ಚಿತ್ತರಂಜನ್ ಇವರಿಗೆ ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರು   “ಆದಿಗ್ರಾಮೋತ್ಸವ ಬಾಲ ಸಿರಿ” ಪ್ರಶಸ್ತಿ ಪ್ರದಾನ ಮಾಡಿದರು.ಮುಖ್ಯ ಅತಿಥಿಗಳಾದ  ಶೇಖರ್ ಅಜೆಕಾರ್,ಯಾಕೂಬ್ ಖಾದರ್ ಗುಲ್ವಾಡಿ ಮೊದಲಾದವರು ಉಪಸ್ಥಿತರಿದ್ದರು.
ಮಾ. ಚಿತ್ತರಂಜನ್ ರವರು  ದ..ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ   ಯಕ್ಷಗಾನ  ನಾಟ್ಯಗುರು  ಸಬ್ಬಣಕೋಡಿ ರಾಮ ಭಟ್ಟರ ಶಿಷ್ಯನಾಗಿದ್ದು ಪೆರ್ಲದ ಪಡ್ರೆ ಚಂದು ಸ್ಮಾರಕ ಯಕ್ಷಗಾನ ನಾಟ್ಯತರಬೇತಿ ಕೇಂದ್ರದ ವಿದ್ಯಾರ್ಥಿಯಾಗಿದ್ದಾನೆ.  ಇವನು‌ ಪಾಣಾಜೆ ಪ್ರಾಥಮಿಕ ಕೃಷಿ ಪತ್ತಿನ ಸೇವಾ ಸಹಕಾರಿ ಸಂಘದ ಸಿಬ್ಬಂದಿ ಕಡಂದೇಲು ಹರೀಶ್ ಕುಮಾರ್ ಹಾಗೂ  ಜ್ಯೋತ್ಸ್ನಾ ದಂಪತಿಗಳ ಪುತ್ರನಾಗಿದ್ದು    ಈತ ದ.ಕ.ಜಿಲ್ಲಾ ರಾಜ್ಯೋತ್ಸವ ಸಾಧಕ ಪುರಸ್ಕಾರ ಪಡೆದ ಬಾಲಪ್ರತಿಭೆ.

LEAVE A REPLY

Please enter your comment!
Please enter your name here