ನೆಲ್ಯಾಡಿ: ಐದು ದಿನದ ಹಿಂದೆ ನಾಪತ್ತೆಯಾಗಿದ್ದ ಕಡಬ ತಾಲೂಕು ನೆಲ್ಯಾಡಿ ಸಮೀಪದ ಕೌಕ್ರಾಡಿ ಗ್ರಾಮದ ಮಣ್ಣಗುಂಡಿ ನಿವಾಸಿ ಇಬ್ರಾಹಿಂ(57ವ.)ರವರು ಫೆ.9ರಂದು ಉಳ್ಳಾಲದಲ್ಲಿ ಪತ್ತೆಯಾಗಿದ್ದಾರೆ.
ಇಬ್ರಾಹಿಂರವರು ಫೆ.4ರಂದು ಮನೆಯಿಂದ ಮಸೀದಿಗೆ ಜುಮಾ ನಮಾಝ್ಗೆಂದು ಹೋದವರು ಮತ್ತೆ ಮನೆಗೆ ಹಿಂತಿರುಗದೆ ನಾಪತ್ತೆಯಾಗಿರುವುದಾಗಿ ಅವರ ಪುತ್ರ ಅಬ್ದುಲ್ ರಶೀದ್ರವರು ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ. ಫೆ.9ರಂದು ನೆಲ್ಯಾಡಿಯಿಂದ ಉಳ್ಳಾಲ ಮಸೀದಿಯಲ್ಲಿ ನಡೆಯುತ್ತಿರುವ ಉರೂಸ್ ಸಮಾರಂಭಕ್ಕೆಂದು ಹೋದವರು ಉಳ್ಳಾಲ ಮಸೀದಿಯಲ್ಲಿ ಇಬ್ರಾಹಿಂರವರು ಇರುವುದನ್ನು ಗಮನಿಸಿ ಅವರ ಮನೆಯವರಿಗೆ ಮಾಹಿತಿ ನೀಡಿದ್ದರು. ಬಳಿಕ ಇಬ್ರಾಹಿಂರವರ ಪುತ್ರ ಅಬ್ದುಲ್ ರಶೀದ್ ಹಾಗೂ ಅಳಿಯ ಹಕೀಂರವರು ಉಳ್ಳಾಲಕ್ಕೆ ತೆರಳಿ ಇಬ್ರಾಹಿಂರವರನ್ನು ಮನೆಗೆ ಕರೆದುಕೊಂಡು ಬಂದಿದ್ದಾರೆ ಎಂದು ತಿಳಿದುಬಂದಿದೆ.