![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಪುತ್ತೂರು: ಬೆಟ್ಟಂಪಾಡಿ ಬಾಲ್ಯೊಟ್ಟುಮಾರ್ ಇರ್ದೆಯ ಶಿರೋಡಿಯನ್ ತರವಾಡು ಮನೆಯಲ್ಲಿ ಫೆ.26 ರಿಂದ ಫೆ.27ರವರೆಗೆ ಧರ್ಮದೈವ ಧೂಮಾವತಿ ಹಾಗೂ ಪರಿವಾರ ದೈವಗಳ ನೇಮೋತ್ಸವ ನಡೆಯಲಿದ್ದು, ನೇಮೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆಯು ಫೆ.12ರಂದು ಶಿರೋಡಿಯನ್ ತರವಾಡು ಮನೆಯಲ್ಲಿ ನಡೆಯಿತು. ಕುಟುಂಬದ ಹಿರಿಯರಾದ ನರಸಿಂಹ ಪೂಜಾರಿ ಬೊಳ್ಳಿಂಬಳ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶೇಷಪ್ಪ ಪೂಜಾರಿ ಪಳಂಬೆ, ಲಕ್ಷ್ಮೀ ಮೆಟಲ್ಸ್ ಪುತ್ತೂರು ಮಾಲಕ ಅಣ್ಣಿ ಪೂಜಾರಿ ಬನ್ನೂರು ಮತ್ತು ಕುಟುಂಬಸ್ಥರು ಉಪಸ್ಥಿತರಿದ್ದರು.