- ಅಧ್ಯಕ್ಷ ಸೇಸಪ್ಪ ರೈ, ಕಾರ್ಯದರ್ಶಿಗಳು ಸತೀಶ್ ನಾಯಕ್, ವಸಂತ ಕುಮಾರ್, ಕೋಶಾಧ್ಯಕ್ಷರು ಬಾಲಚಂದ್ರ ಮುಚ್ಚಿಂತಾಯ
ಉಪ್ಪಿನಂಗಡಿ: ಕಡಬ ತಾಲೂಕು ಕನ್ನಡ ಸಾಹಿತ್ಯ ಪರಿಷತ್ಗೆ ನೂತನ ಅಧ್ಯಕ್ಷರಾಗಿ ಸೇಸಪ್ಪ ರೈ, ನಿಕಟಪೂರ್ವ ಅಧ್ಯಕ್ಷರಾಗಿ ಪಿ. ಜನಾರ್ದನ ಗೌಡ ಪಣೆಮಜಲು, ಗೌರವ ಕಾರ್ಯದರ್ಶಿಗಳಾಗಿ ಎಸ್. ಸತೀಶ್ ನಾಯಕ್, ಡಿ. ವಸಂತ ಕುಮಾರ್ ಸುಬ್ರಹ್ಮಣ್ಯ, ಗೌರವ ಕೋಶಾಧ್ಯಕ್ಷರಾಗಿ ಬಾಲಚಂದ್ರ ಮುಚ್ಚಿಂತಾಯ ರಾಮಕುಂಜ ಆಯ್ಕೆಯಾಗಿದ್ದಾರೆ. ಉಳಿದಂತೆ ಪದಾಧಿಕಾರಿಗಳನ್ನು ಈ ಕೆಳಗಿನಂತೆ ಆಯ್ಕೆ ಮಾಡಲಾಗಿದೆ.
ಪದ ನಿಮಿತ್ತ ಸದಸ್ಯರಾಗಿ ತಾಲೂಕು ಶಿಕ್ಷಣಾಧಿಕಾರಿ ಪುತ್ತೂರು, ಸಂಘ ಸಂಸ್ಥೆಗಳ ಪ್ರತಿನಿಧಿಯಾಗಿ ಯಶವಂತ ರೈ ಸುಬ್ರಹ್ಮಣ್ಯ, ಮಹಿಳಾ ಸಾಹಿತಿಯಾಗಿ ಗ್ರೇಸಿ ಪಿಂಟೋ ಕಡಬ, ಎ. ಪುಷ್ಪಾವತಿ ರಾಮಕುಂಜ,ಸದಸ್ಯರುಗಳಾಗಿ ಎ.ಎನ್. ಕೊಲಂಬೆ ರಾಮಕುಂಜ, ಮಾಯಿಲಪ್ಪ ಬಿ. ಕಡಬ, ಎನ್. ನಾರ್ಣಪ್ಪ ನಾಯ್ಕ ಪುಣ್ಚಪ್ಪಾಡಿ, ಸಿದ್ದಿಕ್ ನೀರಾಜೆ ಕೊಲ, ವೆಂಕಟರಮಣ ನೆಲ್ಯಾಡಿ, ಎನ್.ಜಿ. ಪ್ರಭಾಕರ ರೈ ಎಣ್ಮೂರು, ಪ್ರಕಾಶ್ ವಿಶ್ವಕರ್ಮ ಸುಬ್ರಹ್ಮಣ್ಯ, ರಮೇಶ್ ಕೋಟೆ ಎಣ್ಮೂರು ಆಯ್ಕೆಯಾಗಿದ್ದಾರೆ.