ಪುತ್ತೂರು: ಪೆರುವಾಜೆಯಲ್ಲಿ ನಡೆದ ಭಜನಾ ಸಂಕೀರ್ತನಾ ಸ್ಪರ್ಧೆ – 2022 ರಲ್ಲಿ ಆಹ್ವಾನಿತ ತಂಡಗಳ ಪೈಕಿ ಬೆಟ್ಟಂಪಾಡಿಯ ಮಿತ್ತಡ್ಕ ಕೇಸರಿ ಭಜನಾ ತಂಡ ದ್ವಿತೀಯ ಪ್ರಶಸ್ತಿ ಪಡೆದುಕೊಂಡಿತು. ಭಾವೈಕ್ಯ ಯುವಕ ಮಂಡಲ ಪೆರುವಾಜೆ, ಶ್ರೀ ಜಲದುರ್ಗಾದೇವಿ ದೇವಸ್ಥಾನ ಪೆರುವಾಜೆ ಹಾಗೂ ಶ್ರೀ ಜಲದುರ್ಗಾದೇವಿ ಭಜನಾ ಮಂಡಳಿ ಪೆರುವಾಜೆ ಇವರ ಸಹಯೋಗದಲ್ಲಿ ಏ. 10 ರಂದು ನಡೆದ ಸ್ಪರ್ಧೆಯಲ್ಲಿ ಕೇರಳ ಮತ್ತು ಕರ್ನಾಟಕದ ಆಹ್ವಾನಿತ 9 ತಂಡಗಳು ಭಾಗವಹಿಸಿದ್ದವು. ಪ್ರಥಮ ಪ್ರಶಸ್ತಿಯನ್ನು ಕೇರಳದ ಕೈತ್ತೋಡು ಶ್ರೀ ಶಾರದಾಂಬ ಭಜನಾ ಸಂಘ ಪಡೆದುಕೊಂಡಿದೆ.