ಪುತ್ತೂರು: ಕೊಡಿಪಾಡಿ ಗ್ರಾಮದ ಹಣಿಯೂರು ಗುತ್ತುವಿನಲ್ಲಿ ಮೇ.14ರಿಂದ ಮೇ.18ರ ವರೆಗೆ ನಡೆಯಲಿರುವ ದೈವಗಳ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಪೂರ್ವಭಾವಿ ಸಮಾಲೋಚನ ಸಭೆಯು ಹನಿಯೂರು ಗುತ್ತು ಫ್ಯಾಮಿಲಿ ಟ್ರಸ್ಟ್ ನ ಅಧ್ಯಕ್ಷರಾದ ಡಾ.ಕೆ.ಸಿ. ನಾಯ್ಕ್ ರವರ ಅಧ್ಯಕ್ಷತೆಯಲ್ಲಿ ಎ.10ರಂದು ಸಾಯಂಕಾಲ ೪ಗಂಟೆಗೆ ಹನಿಯೂರುಗುತ್ತು ತರವಾಡಿನಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಡಾ.ಕೆ.ಸಿ. ನಾಯ್ಕ್ ರವರ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಒಗ್ಗಟ್ಟಿನಿಂದ ಈ ಒಂದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ನಾವೆಲ್ಲರು ಪ್ರಯತ್ನಿಸಬೇಕು. ಒಟ್ಟಾರೆಯಾಗಿ ನಮ್ಮ ತರವಾಡಿನ ಕಾರ್ಯಕ್ರಮ ಒಂದು ಮಾದರಿ ಕಾರ್ಯಕ್ರಮವಾಗಿ ಮಾಡಬೇಕು. ಇದಕ್ಕೆ ಕುಟುಂಬದ ಸದಸ್ಯರುಗಳ ಸರ್ವ ರೀತಿಯ ಸಹಕಾರ ಬೇಕಾಗಿದೆ ಎಂದರು. ಕುಟುಂಬದ ಸದಸ್ಯರುಗಳು ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಬಳಿಕ ಕಾರ್ಯಕ್ರಮದ ವಿವಿಧ ರೂಪುರೇಶೆಗಳನ್ನು ತಯಾರಿಸಲಾಯಿತು. ಈ ಸಂದರ್ಭದಲ್ಲಿ ಕುಟುಂಬದ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.