ಪುತ್ತೂರು: ಅರಿಯಡ್ಕ ಗ್ರಾಮದ ಕೊಂಬರಡ್ಕ ಕರ್ಕೇರ ತರವಾಡು ದೈವಸ್ಥಾನದಲ್ಲಿ ಮೇ.2 ರಿಂದ 4 ರವೆಗೆ ನಡೆಯಲಿರುವ ಧರ್ಮದೈವ ವರ್ಣರ ಪಂಜುರ್ಲಿ, ಪರಿವಾರ ದೈವಗಳ ನೇಮೋತ್ಸವದ ಪ್ರಯುಕ್ತ ಕೊಂಬರಡ್ಕ ಕರ್ಕೇರ ತರವಾಡು ದೈವಸ್ಥಾನದಲ್ಲಿ ಎ.25ರಂದು ಗೊನೆ ಮುಹೂತ ನಡೆಯಿತು.
ಈ ಸಂದರ್ಭದಲ್ಲಿ ಕುಟುಂಬದ ಯಾಜಮಾನರಾದ ಗೋವಿಂದ ಪೂಜಾರಿ ಕೂರೆಲು, ಉಪಾಧ್ಯಕ್ಷರಾದ ಭಾಲಕೃಷ್ಣ ದೋಲ, ಪ್ರಧಾನ ಕಾರ್ಯದರ್ಶಿ ಭಾಸ್ಕರ ಕೋಡಿ, ದೈವದ ಪ್ರಧಾನ ಪಾತ್ರಿ ಸುರೇಂದ್ರ ಪೂಜಾರಿ ಪೆದಮಲೆ, ಹಿರಿಯ ಪಾತ್ರಿಯವರಾದ ರಾಮಣ್ಣ ಪೂಜಾರಿ ಪಯಂದೂರು, ಸಹಾಯಕ ಪಾತ್ರಿಗಳಾದ ಉಮೇಶ್ ಪೂಜಾರಿ ಮಡಿಕೇರಿ, ಸಂಕಪ್ಪ ಸಾಂತ್ಯ, ವಿಕ್ಕಿ ಬಂಟ್ವಾಳ ಹಾಗು ತರವಾಡು ಮನೆಯ ಪ್ರಮುಖ ಸದಸ್ಯರುಗಳು ಹಾಜರಿದ್ದರು. ಹಾಗು ಕುಟುಂಬದ ಪ್ರಮುಖ ಸದಸ್ಯರುಗಳು ಉಪಸ್ಥಿತರಿದ್ದರು.