ಉರ್ಲಾಂಡಿ ಅಪಘಾತ: ಗಾಯಾಳು ಆಶಿರ್ ತುಸು ಚೇತರಿಕೆ -ಮೆದುಳಿಗೆ ಬಲವಾದ ಗಾಯ

0

ಪುತ್ತೂರು; ಮೇ. 4 ರಂದು ಪುತ್ತೂರು ಬೈಪಾಸ್ ರಸ್ತೆಯ ಉರ್ಲಾಂಡಿಯಲ್ಲಿ ನಡೆದ ಸ್ಕೂಟರ್ ಮತ್ತು ಟಿಪ್ಪರ್ ಅಪಘಾತದಲ್ಲಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಸಂಟ್ಯಾರ್ ನೆಕ್ರಾಜೆ ನಿವಾಸಿ ಆಶಿರ್ ಆರೋಗ್ಯದಲ್ಲಿ ತುಸು ಚೇತರಿಕೆ ಕಂಡಿದ್ದು , ಮೆದುಳಿಗೆ ಬಲವಾದ ಗಾಯವಾಗಿರುವ ಕಾರಣ ಈಗಲೂ ಗಂಭೀರ ಸ್ಥಿತಿಯಲ್ಲೇ ಇರುವುದಾಗಿ ಕುಟುಂಬದ ಮೂಲಗಳು ತಿಳಿಸಿದೆ.


ಅರಿಯಡ್ಕ ನಿವಾಸಿ ಸಿನಾನ್ ಮತ್ತು ಆಶಿರ್ ಸ್ಕೂಟರ್‌ನಲ್ಲಿ ತೆರಳುತ್ತಿದ್ದ ವೇಳೆ ಅಪಘಾರ ಸಂಭವಿಸಿದ್ದು ಸವಾರ ಸಿನಾನ್ ಸ್ಥಳದಲ್ಲೇ ಮೃತಪಟ್ಟಿದ್ದು, ಗಾಯಾಳು ಆಶಿರ್‌ನ ತಲೆಯ ಭಾಗಕ್ಕೆ ಬಲವಾದ ಗಾಯಗಳಾಗಿರುವ ಕಾರಣ ಆರೋಗ್ಯದ ವಿಚಾರದಲ್ಲಿ ವೈದ್ಯರು ಯಾವುದೇ ಮಾಹಿತಿ ನೀಡಲು ನಿರಾಕರಿಸಿದ್ದಾರೆ ಎಂದು ಆಶಿರ್ ಕುಟುಂಬ ಮಾಹಿತಿ ನೀಡಿದೆ. ಈ ನಡುವೆ ಆಶಿರ್ ಮೃತಪಟ್ಟಿರುವುದಾಗಿ  ಸೋಶಿಯಲ್ ಮೀಡಿಯಾದಲ್ಲಿ  ಸುದ್ದಿ ಹರಡಿತ್ತು.

LEAVE A REPLY

Please enter your comment!
Please enter your name here