ಪುತ್ತೂರು: ಕಾಂಗ್ರೆಸ್ ಪಕ್ಷದ ಸಂಯೋಜಕ ಅಗರಿ ನವೀನ್ ಭಂಡಾರಿರವರ ಕಾರು ಅಪಘಾತ

0

ಪುತ್ತೂರು: ದ.ಕ, ಲೋಕಸಭಾ ಕ್ಷೇತ್ರದ ಪುತ್ತೂರು ಕ್ಷೇತ್ರದ ಕಾಂಗ್ರೆಸ್ ಪಕ್ಷದ ಸಂಯೋಜಕರಾಗಿರುವ, ಭಾರತೀಯ ರಿಸರ್ವ ಬ್ಯಾಂಕಿನ ಮಾಜಿ ನಿರ್ದೇಶಕ ಅಗರಿ ನವೀನ್ ಭಂಡಾರಿರವರ ಕಾರಿಗೆ ಸರ್ವೆಯಲ್ಲಿ ಏ.26ರಂದು‌ ಅಪರಾಹ್ನ ಅಪಘಾತ ಸಂಭವಿಸಿದೆ. ನವೀನ್ ಭಂಡಾರಿರವರು ಪುತ್ತೂರು ಕ್ಷೇತ್ರದ ಎಲ್ಲಾ ಬೂತ್ ಗಳಿಗೆ ಭೇಟಿ ನೀಡುತ್ತಿದ್ದು, ಆದರಂತೆ‌ ಅಪರಾಹ್ನ ಸರ್ವೆ ಬೂತ್ ಗೆ ಭೇಟಿ ನೀಡಿ ಕಾಂಗ್ರೆಸ್ ಕಾರ್ಯಕರ್ತರನ್ನು ಭೇಟಿ ಮಾಡಿ ಹಿಂತಿರುಗುತ್ತಿದ್ದ ವೇಳೆ ಸ್ಥಳೀಯರೊಬ್ಬರ‌ ಎಲ್ ಬೋರ್ಡ್ ಕಾರ್ ನವೀನ್ ಭಂಡಾರಿಯವರ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ‌, ಕಾರಿಗೆ‌ ಹಾನಿಯಾಗಿದ್ದು, ಕಾರಿನಲ್ಲಿದ್ದ ನವೀನ್ ಭಂಡಾರಿಯವರ ಕಾಲಿಗೆ ಸಲ್ಪ ಗಾಯ‌ ಆಗಿದ್ದು, ಅಪಾಯದಿಂದ ಪಾರಾಗಿದ್ದಾರೆ. ಈ ಬಗ್ಗೆ ಸುದ್ದಿಯೊಂದಿಗೆ ಮಾತನಾಡಿದ‌ ಅಗರಿ‌ ನವೀನ್‌ ಭಂಡಾರಿರವರು ಕಾಲಿಗೆ ಸ್ವಲ್ಪ ನೋವು‌ ಆಗಿದೆ. ದೇವರು ಕೃಪೆಯಿಂದ ಹೆಚ್ಚಿನ ತೊಂದರೆ ಆಗಿಲ್ಲ ಎಂದು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here