ಕಾಣಿಯೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್ ಬೆಳಂದೂರು ಒಕ್ಕೂಟದ ವತಿಯಿಂದ ಅಗಳಿ ಶ್ರೀ ಸದಾಶಿವ ದೇವಸ್ಥಾನದಲ್ಲಿ ನಡೆದ ಶನಿಪೂಜೆಯಲ್ಲಿ ಉಳಿಕೆಯಾದ ಹಣವನ್ನು ಅಗಳಿ ಸದಾಶಿವ ದೇವಸ್ಥಾನದ ಶ್ರೀ ಶಾಸ್ತ್ರಾವು ದೇವರಿಗೆ ಬೆಳ್ಳಿಯ ಕವಚವನ್ನು ಒಕ್ಕೂಟದ ವತಿಯಿಂದ ದೇವಸ್ಥಾನದಲ್ಲಿ ದೇವರಿಗೆ ಪೂಜೆ ಸಲ್ಲಿಸಿ ಸಮರ್ಪಣೆ ಮಾಡಲಾಯಿತು. ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಉದಯ ರೈ ಮಾದೋಡಿ, ಸದಸ್ಯರಾದ ತಾರಾ ಬೆಳಂದೂರು, ಅನುವಂಶೀಯ ಮೊಕ್ತೇಸರರಾದ ಉದಯ ಕುಮಾರ್ ಅಗಳಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬೆಳಂದೂರು ಒಕ್ಕೂಟದ ಅಧ್ಯಕ್ಷರಾದ ವೇಣುಗೋಪಾಲ್ ಕಳುವಾಜೆ, ಉಪಾಧ್ಯಕ್ಷರಾದ ಶಿವರಾಮ ಮರಕ್ಕಡ , ಬೆಳಂದೂರು ಗ್ರಾಮ ಪಂಚಾಯತ್ ಸದಸ್ಯರಾದ ಜಯಂತ ಅಬೀರ ಮತ್ತು ಒಕ್ಕೂಟದ ಸದಸ್ಯರುಗಳು ಉಪಸ್ಥಿತರಿದ್ದರು.