ಪುತ್ತೂರು: ಪ್ರಯೋಗಾಲಯ ಕ್ಷೇತ್ರದಲ್ಲಿ ಪುತ್ತೂರಿನ ಜನತೆಗೆ ಕಡಿಮೆ ದರದಲ್ಲಿ ಅತ್ಯುತ್ತಮ ಸೇವೆಯನ್ನು ನೀಡುತ್ತಾ ಈಗಾಗಲೇ ಪ್ರಸಿದ್ಧಿಯನ್ನು ಪಡೆದಿರುವ `ವಿ ಕೇರ್ ಲ್ಯಾಬ್ಸ್’ ಇದೀಗ ಮತ್ತೊಂದು ಸೇವೆಯನ್ನು ಆರಂಭಿಸಿದೆ. ಪ್ರಯೋಗಾಲಯ ಸೇವೆಯೆ ಜೊತೆ ಜೊತೆಗೆ ವಿವಿಧ ಆರೋಗ್ಯ ವಿಭಾಗಗಳಿಗೆ ಸಂಬಂಧಿಸಿದ ತಜ್ಞ ವೈದ್ಯರಿಂದ ಸೂಕ್ತ ತಪಾಸಣೆ, ಸೇವೆಯನ್ನು ಒದಗಿಸುವ ನಿಟ್ಟಿನಲ್ಲಿ `ವಿ ಕೇರ್ ಪಾಲಿ ಕ್ಲಿನಿಕ್’ನ್ನು ಆರಂಭಿಸಲಾಗಿದೆ. ವಿ ಕೇರ್ ಲ್ಯಾಬೋರೇಟರಿಯವರ ಸಹ ಸಂಸ್ಥೆ ವಿ ಕೇರ್ ಪಾಲಿಕ್ಲಿನಿಕ್ ನ್ನು ದುವಾಆಶೀರ್ವಾಚ ಗೈದು ಉದ್ಘಾಟಿಸಿ ಕಲ್ಲೇಗ ಜುಮ್ಮಾ ಮಸೀದಿಯ ಖತೀಬ್ ಸಿದ್ಧೀಕ್ ಜಲಾಲಿಯ ನೂತನ ಸಂಸ್ಥೆಗೆ ಶುಭ ಹಾರೈಸಿದರು.
ಪುತ್ತೂರಿನ ಹೃದಯ ಭಾಗವಾದ ಕಲ್ಲಾರೆಯ ಶ್ರೀನಿವಾಸ ಪ್ಲಾಜಾದಲ್ಲಿ ವಿ-ಕೇರ್ ಪಾಲಿ ಕ್ಲಿನಿಕ್ ಶುಭಾರಂಭಗೊಂಡಿದ್ದು, ಮಂಗಳೂರು ಸೇರಿದಂತೆ ವಿವಿಧ ಕಡೆಗಳಿಂದ ವಿವಿಧ ವಿಭಾಗದ ತಜ್ಞ ವೈದ್ಯರು ಇಲ್ಲಿಗೆ ಆಗಮಿಸಿ ಸೇವೆ ನೀಡಲಿದ್ದಾರೆ. ಈಗಾಗಲೇ ಪ್ರಸಿದ್ಧ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಹಾಗೂ ಲ್ಯಾಪ್ರೋಸ್ಕೋಪಿ ಸರ್ಜನ್ ಡಾ. ಕಾವ್ಯರಶ್ಮಿ ರಾವ್ ಅವರು ಸೇವೆಗೆ ಲಭ್ಯರಿದ್ದಾರೆ.
ಮೆಲ್ಕಾರ್ನ ಆರ್.ಆರ್. ಮೆಟರ್ನಿಟಿ ಮತ್ತು ಜನರಲ್ ಆಸ್ಪತ್ರೆಯಲ್ಲಿ 4 ವರ್ಷಗಳಿಂದ ಸೇವೆ ಒದಗಿಸುತ್ತಿರುವ ಡಾ. ಕಾವ್ಯರಶ್ಮೀ ರಾವ್ ಅವರು ಬಂಜೆತನ ನಿವಾರಣೆ, ರಕ್ತಸ್ರಾವದ ಸಮಸ್ಯೆ, ಲ್ಯಾಪ್ರೋ ಸ್ಕೋಪಿ ಸ್ತ್ರೀರೋಗ ಮತ್ತು ಪ್ರಸೂತಿ ವಿಭಾಗದ ಸ್ಪೆಷಲಿಸ್ಟ್ ಆಗಿದ್ದಾರೆ. ಪುತ್ತೂರು ವಿಕೇರ್ ಪಾಲಿಕ್ಲಿನಿಕ್ನಲ್ಲಿ ಬುಧವಾರ, ಗುರುವಾರ ಮತ್ತು ಶುಕ್ರವಾರ ಬೆಳಗ್ಗೆ 11ರಿಂದ ಮಧ್ಯಾಹ್ನ 1.30ರವರೆಗೆ ಸಂದರ್ಶನಕ್ಕೆ ಲಭ್ಯರಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಯುವತಿ-ಮಹಿಳೆಯರಲ್ಲಿ ಕಂಡುಬರುವ ಪಿಸಿಒಡಿ ಸಮಸ್ಯೆಗಳು, ಮಧ್ಯವಯಸ್ಕ ಮಹಿಳೆಯರಲ್ಲಿ ಕಂಡುಬರುವ ಅಧಿಕ ಸ್ರಾವದ ಸಮಸ್ಯೆಗಳು, ಹೊಟ್ಟೆನೋವು ಬಂಜೆತನ, ಲ್ಯಾಪ್ರೋಸ್ಕೋಪಿ ಸಮಸ್ಯೆಗಳು ಇತ್ಯಾದಿ ಸಮಸ್ಯೆಗಳನ್ನು ಹೊಂದಿರುವವರು, ಸಂತಾನ ನಿರೋಧಕ ವ್ಯವಸ್ಥೆಗಳು ಇತ್ಯಾದಿಗಳ ಬಗ್ಗೆ ಡಾ.ಕಾವ್ಯ ರಶ್ಮಿ ರಾವ್ ಅವರು ವಿಶೇಷ ಪರಿಣತಿ ಹೊಂದಿದ್ದು, ಕೆಲವೊಂದು ಸಮಸ್ಯೆಗಳಿಗೆ ಸರ್ಜರಿಯ ಅವಶ್ಯಕತೆ ಇದ್ದಾಗ, ಸರ್ಜರಿ ಮಾಡದೆ ಲ್ಯಾಪ್ರೊಸ್ಕೋಪಿ ಕೀ ಹೋಲ್ ಸರ್ಜರಿ ಮಾಡುವ ವಿಶೇಷ ಸೌಲಭ್ಯವೂ ಲಭ್ಯವಿದೆ. ಈ ನಿಟ್ಟಿನಲ್ಲಿ ಯಾವುದೇ ಸಮಸ್ಯೆಗಳಿರುವ ಮಹಿಳೆಯರು-ಯುವತಿಯರು ಯಾವುದೇ ಹಿಂಜರಿಕೆಯಿಲ್ಲದೆ ಬಂದು ತಪಾಸಣೆ ಮಾಡಿಸಿಕೊಳ್ಳಬಹುದು ಎಂದು ಡಾ. ಕಾವ್ಯ ರಶ್ಮಿ ರಾವ್ ತಿಳಿಸಿದ್ದಾರೆ.ಜೊತೆಗೆ ಜನರಲ್ ಮೆಡಿಸಿನ್ ತಜ್ಞರಾದ ಡಾ. ಯದುರಾಜ್ ಡಿ.ಕೆ., ಇಂಟಿಗ್ರೇಟೆಡ್ ಮೆಡಿಕಲ್ ಪ್ರಾಕ್ಟೀಶನರ್ ಡಾ. ಕುಲಕರ್ಣಿ ಪಿ.ಎನ್., ಸರ್ಜಿಕಲ್ ಗ್ಯಾಸ್ಟ್ರೋಎಂಟರೊಲಾಜಿಸ್ಟ್, ಎಂಡೋಸ್ಕೋಪಿಸ್ಟ್, ಲ್ಯಾಪ್ರೋಸ್ಕೋಪಿ ಸ್ಪೆಷಲಿಸ್ಟ್ ಡಾ. ಅಶ್ವಿನ್ ಆಳ್ವ ಅವರು ಕೂಡ ವಿಕೇರ್ ಪಾಲಿಕ್ಲಿನಿಕ್ ನಲ್ಲಿ ಸಂದರ್ಶನಕ್ಕೆ ಲಭ್ಯರಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ:6363695272