ಏಕಾಂಗಿಯಾಗಿ ಶ್ರಮದಾನ ಮಾಡಿದ ಯುವಕ

0

ಪುತ್ತೂರು; ಮಾಣಿ-ಮೈಸೂರು ರಾ.ಹೆದ್ದಾರಿ 275 ರ ಕುಂಬ್ರ ಸೇತುವೆಯ ಬಳಿ ಮಳೆ ನೀರು ಹರಿದು ವಾಹನ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ. ಮಳೆಗಾಲ ಆರಂಭದಿಂದಲೇ ಈ ಸಮಸ್ಯೆ ಇದೆ.

ಸೇತುವೆಯ ಮೇಲೆ ಭಾರೀ ಪ್ರಮಾಣದಲ್ಲಿ ನೀರು ಸಂಗ್ರಹಣೆಯಾಗುವ ಕಾರಣಕ್ಕೆ ವಾಹನ ಸಂಚಾರ ಮತ್ತು ಪಾದಚಾರಿಗಳಿಗೆ ತೀವ್ರ ತೊಂದರೆಯಾಗುತ್ತಿತ್ತು. ಇದನ್ನು ಮನಗಂಡ ಕುಂಬ್ರ ಮೆಟ್ರೋ ಕಾರ್‌ವಾಶ್‌ನ ಶರೀಫ್ ಕೊಯಿಲ ಎಂಬವರು ಏಕಾಂಗಿಯಾಗಿ ಶ್ರಮದಾನ ಮಾಡುವ ಮೂಲಕ ಐದು ಕಡೆಗಳಲ್ಲಿ ರಸ್ತೆಯಲ್ಲಿ ಹರಿಯುತ್ತಿದ್ದ ನೀರಿಗೆ ತಡೆ ನಿರ್ಮಿಸಿದ್ದಾರೆ. ಇದರಿಂದ ರಸ್ತೆಯಲ್ಲಿ ಮಳೆ ನೀರು ಹರಿಯುವುದು ನಿಂತಿದೆ. ಶರೀಫ್ ರವರ ಕಾರ್ಯಕ್ಕೆ ಸಾರ್ವತ್ರಿಕ ಶ್ಲಾಘನೆ ವ್ಯಕ್ತವಾಗಿದೆ.

LEAVE A REPLY

Please enter your comment!
Please enter your name here