ಪುತ್ತೂರು : ಹಲಸಿನ ಹಣ್ಣು ಇಡಿಯಾಗಿ ನಿಮಗೆ ಬೇಕೆ? ಕೆಂಪು ಸೊಳೆಯ ಹಣ್ಣು ನೀವೆಂದಾದರೂ ಕಂಡಿದ್ದೀರಾ? ಹಾಗಿದ್ದರೆ ಪುತ್ತೂರಿನ ಮಂದಿಯ ನಿರೀಕ್ಷೆಯ ಹಲಸು ಮತ್ತು ಹಣ್ಣು ಮೇಳ ಮತ್ತೆ ಬಂದಿದ್ದು ನವತೇಜ ಪುತ್ತೂರು ಮತ್ತು ಜೆಸಿಐ ಪುತ್ತೂರು ಇದರ ಸಹಯೋಗದೊಂದಿಗೆ ಜೂ.25 ಮತ್ತು 26ರಂದು ಪುತ್ತೂರು ಶ್ರೀಲಕ್ಷ್ಮೀವೆಂಕಟರಮಣ ದೇವಸ್ಥಾನದ ಸುಕೃತೀಂದ್ರ ಸಭಾಭವನದಲ್ಲಿ ನಡೆಯಲಿದೆ.
ಮಳಿಗೆ ತೆರೆಯಲು ಸೀಮಿತ ಸ್ಥಳವಕಾಶ ಇರುವ ಕಾರಣ, ಒಂದು ಉತ್ಪನ್ನಕ್ಕೆ ಒಂದೇ ಮಳಿಗೆ ಎಂಬ ನಿರ್ಧಾರ ಮಾಡಲಾಗಿದೆ. ಗ್ರಾಹಕರು ಸಹಕರಿಸಬೇಕು ಎಂದು ಪ್ರಕಟಣೆ ತಿಳಿಸಿದೆ.