ಉಪ್ಪಿನಂಗಡಿ: ಸುಬ್ರಹ್ಮಣ್ಯ ಕ್ರಾಸ್ ರಸ್ತೆ ಹೊಂಡ ಮುಚ್ಚಿಸಲಾಗ್ರಹ

0

ಉಪ್ಪಿನಂಗಡಿ : ರಾ ಹೆ 75 ನ್ನು ಸಂಪರ್ಕಿಸುವ ಉಪ್ಪಿನಂಗಡಿಯ ಸುಬ್ರಹ್ಮಣ್ಯ ಕ್ರಾಸ್ ಬಳಿಯ ರಸ್ತೆಯಲ್ಲಿ ಉದ್ಭವಿಸಿರುವ ಹೊಂಡ ಗುಂಡಿಗಳು ದ್ವಿಚಕ್ರ ಸವಾರರ ಪಾಲಿಗೆ ಅಪಾಯಕಾರಿಯಾಗಿದ್ದು, ದಿನ ನಿತ್ಯ ಅಪಘಾತವಾಗುತ್ತಿರುವ ಬಗ್ಗೆ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಮಳೆಯಿಂದಾಗಿ ನೀರು ತುಂಬಿರುವ ಹೊಂಡಗಳ ಆಳ ತಿಳಿಯದೇ ದ್ವಿಚಕ್ರ ವಾಹನ ಸವಾರರು ಇಲ್ಲಿ ಬಿದ್ದೇಳುವುದು ನಿತ್ಯ ನಿರಂತರವಾಗಿದೆ. ವಾಹನ ಸವಾರರ ಜೀವ ರಕ್ಷಣೆಯ ನೆಲೆಯಲ್ಲಿಯಾದರೂ, ರಸ್ತೆಯಲ್ಲಿ ಮೂಡಿರುವ ಹೊಂಡಗಳನ್ನು ಮುಚ್ಚಲು ಸಂಬಂಧಿತ ಅಧಿಕಾರಿಗಳು ಗಮನ ಹರಿಸಬೇಕೆಂದು ಸ್ಥಳೀಯ ನಿವಾಸಿ ಸ್ನೇಕ್ ಝಕರಿಯಾ ಅಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here