ಪುತ್ತೂರು: ಅಂಬಿಕಾ ಪದವಿ ಪೂರ್ವ ವಿದ್ಯಾಲಯ ನೆಲ್ಲಿಕಟ್ಟೆಯ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಸಂಘದ ಅಧ್ಯಕ್ಷರಾಗಿ ಆಕಾಶ್ ಜೆ ರಾವ್ ಹಾಗೂ ಕಾರ್ಯದರ್ಶಿಯಾಗಿ ಯಶು ಬಿ ಜಿ ಆಯ್ಕೆಯಾದರು.
ಉಪಾಧ್ಯಕ್ಷರಾಗಿ ಮಾನ್ಯ ಐ ಎನ್ ಹಾಗೂ ಜೊತೆ ಕಾರ್ಯದರ್ಶಿಯಾಗಿ ಉತ್ಸವಿ ಎಸ್ ರೈಯವರು ಆಯ್ಕೆಯಾಗಿದ್ದಾರೆ. ಸಾಂಸ್ಕೃತಿಕ ಮಂತ್ರಿಯಾಗಿ ದ್ವಿತೀಯ ಪಿಯುಸಿಯ ವೈ ರಾಮ್ಪ್ರಸಾದ್ ಹಾಗೂ ಪ್ರಥಮ ಪಿಯುಸಿಯ ಚಂದನ ಲಕ್ಷ್ಮಿ, ಆರೋಗ್ಯ ಹಾಗೂ ಸ್ವಚ್ಛತಾ ಮಂತ್ರಿಯಾಗಿ ಕುಶಲ್ಯ ಹಾಗೂ ವರುಣ್ ಎಂ, ಶಿಸ್ತು ಮಂತ್ರಿಯಾಗಿ ನಿತೇಶ್ ಎನ್ ಹಾಗೂ ವೈಷ್ಣವಿ ಎಸ್, ಶಿಕ್ಷಣ ಮಂತ್ರಿಯಾಗಿ ವಿವೇಕ್ ಎಸ್ ಮತ್ತು ಅಭಯ್ ಎಸ್ ರಾವ್ ಆಯ್ಕೆಯಾಗಿರುತ್ತಾರೆ.