ಪುತ್ತೂರು: ಭಾರಿ ಮಳೆಯಿಂದಾಗಿ ಹಾರಾಡಿಯಿಂದ ರೈಲ್ವೇ ನಿಲ್ದಾಣ ಸಂಪರ್ಕಿಸುವ ರಸ್ತೆ ಬದಿಯಲ್ಲಿ ಕುಸಿತಗೊಂಡ ಘಟನೆ ಜು.5ರ ಬೆಳಿಗ್ಗೆ ನಡೆದಿದೆ.
ಹಾರಾಡಿಯಿಂದ ರೈಲ್ವೇ ನಿಲ್ದಾಣ ಸಂಪರ್ಕಿಸುವ ರಸ್ತೆ ತೀರಾ ಹದಗೆಟ್ಟಿದೆಯಾದರೂ ಈ ರಸ್ತೆ ಪುತ್ತೂರು ಪೇಟೆಗೆ ಹತ್ತಿರದ ಸಂಪರ್ಕವಾದ್ದರಿಂದ ಅನೇಕ ವಾಹನಗಳು ಇದೇ ರಸ್ತೆಯಿಂದಾಗಿ ಹೋಗುತ್ತವೆ. ಆದರೆ ಇದೀಗ ಇದೇ ರಸ್ತೆಯ ರೈಲ್ವೇ ನಿಲ್ದಾಣದ ಬಳಿಯಲ್ಲಿ ರಸ್ತೆ ಬದಿ ಮಣ್ಣು ಕುಸಿತವಾದ್ದರಿಂದ ಅಪಾಯ ಸಂಭವಿಸುವ ಸಾಧ್ಯತೆ ಇದೆ.