ಬಡಗನ್ನೂರುಃ ಬಡಗನ್ನೂರು ಗ್ರಾಮ ಪಂಚಾಯತಿ ವ್ಯಾಪ್ತಿಗೆ ಒಳಪಟ್ಟ ಪಡುವನ್ನೂರು ಗ್ರಾಮದ ಮಾಪಲ – ಮೈಕುಲಿ ಸಂಪರ್ಕ ರಸ್ತೆ ಕೆಂಪು ಕಲ್ಲು ಸಾಗಾಟದ ಲಾರಿಗಳು ಸಂಚರಿಸಿ ರಸ್ತೆ ತೀರಾ ಹದಗೆಟ್ಟಿದ್ದು ಜನ, ವಾಹನ ಸಂಚಾರ ಹಾಗೂ ಕಷ್ಟಕರವಾಗುತ್ತಿರುವ ಹಿನ್ನೆಲೆಯಲ್ಲಿ ಈ ಬಾಗದ ಸ್ಥಳೀಯರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ಪ್ರತಿಭಟನಾ ಸ್ಥಳಕ್ಕೆ ಬಡಗನ್ನೂರು ಗ್ರಾ.ಪಂ ಅಧ್ಯಕ್ಷೆ ಶ್ರೀಮತಿ ಕೆ, ಉಪಾಧ್ಯಕ್ಷ ಸಂತೋಷ್ ಅಳ್ವ, , ವಾರ್ಡ್ ಸದಸ್ಯರಾದ ಸುಜಾತ ಎಂ, ಮತ್ತು ಧರ್ಮೇಂದ್ರ ಪದಡ್ಕ ಹಾಗೂ ಅಭಿವೃದ್ಧಿ ಅಧಿಕಾರಿ ವಸೀಮ ಗಂಧದ ಆಗಮಿಸಿ ಮಾತುಕತೆ ನಡೆಸಿದರು. ಬಳಿಕ ಉಪಾಧ್ಯಕ್ಷ ಸಂತೋಷ್ ಅಳ್ವ ಮಾತನಾಡಿ ಮುಂದೆ ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿ ಅನುದಾನ ಇಟ್ಟು ಕಾಂಕ್ರೀಟ್ ರಸ್ತೆಯನ್ನಾಗಿ ಅಭಿವೃದ್ಧಿ ಪಡಿಸುವ ಬಗ್ಗೆ ಭರವಸೆ ನೀಡಿದರು.
ಮಂಗಳಾದೇವಿ ಲಾರಿ ಮಾಲಕ ಸುಧಾಕರ ಶೆಟ್ಟಿ ರಸ್ತೆಗೆ ಕಲ್ಲು ಹಾಸಿ ತುರ್ತು ಕಾಮಗಾರಿ ನಡೆಸಿಕೊಡುವ ಬಗ್ಗೆ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸ್ಥಳೀಯರಾದ ತ್ಯಾಂಪಣ್ಣ ಮೂಲ್ಯ, ಗಣೇಶ ಭಟ್ ಈಶಮೂಲೆ, ಶ್ರೀಧರ ಕುಲಾಲ್ ಪೈರುಪುಣಿ, ನಾಗೇಶ್ ಭಂಡಾರಿ, ಚುಕೇಶ್ ಕುಲಾಲ್, ಪ್ರದೀಪ್ ಉಪಸ್ಥಿತರಿದ್ದರು.