ಪುತ್ತೂರು:ಸುದ್ದಿ ಜನಾಂದೋಲನ ವೇದಿಕೆಯ ಮೂಲಕ ಲಂಚ, ಭ್ರಷ್ಟಾಚಾರದ ವಿರುದ್ಧ ನಡೆಯುತ್ತಿರುವ ಆಂದೋಲನದಲ್ಲಿ ಲಂಚ ರಹಿತವಾಗಿ, ಉತ್ತಮ ಸೇವೆ ನೀಡುವ ಅಽಕಾರಿಯಾಗಿ ಜನರಿಂದ ಆಯ್ಕೆಯಾಗಿರುವ ಕೆಎಸ್ಆರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಜಯಕರ ಶೆಟ್ಟಿಯವರಿಗೆ ನಿಗಮದ ವ್ಯವಸ್ಥಾಪನಾ ನಿರ್ದೇಶಕ ವಿ.ಅನ್ಬುಕುಮಾರ್ ಅಭಿನಂದನಾ ಪತ್ರ ನೀಡಿದ್ದಾರೆ.
‘ಸುದ್ದಿ ಬಿಡುಗಡೆ ಪತ್ರಿಕೆಯು ನಡೆಸಿದ ಜನ ಮತದ ಸಂಗ್ರಹದಲ್ಲಿ ಲಂಚ ರಹಿತವಾಗಿ, ಉತ್ತಮ ಸೇವೆ ಮಾಡುತ್ತಿರುವ ಅಽಕಾರಿಯಾಗಿ ಆಯ್ಕೆಯಾಗಿರುವುದು ಹೆಮ್ಮೆಯ ಸಂಗತಿಯಾಗಿದೆ. ತಮ್ಮ ನಿಸ್ಪೃಹ ಸೇವೆ, ಪಾರದರ್ಶಕ ಆಡಳಿತ, ಸಾರ್ವಜನಿಕ ವಲಯದಲ್ಲಿ ನಿಗಮದ ಬಗ್ಗೆ ಒಳ್ಳೆಯ ನಂಬಿಕೆ ಹಾಗೂ ಅಭಿಪ್ರಾಯ ಮೂಡುವಂತೆ ಮಾಡಿ, ಇತರೇ ಅಽಕಾರಿಗಳಿಗೆ ಆದರ್ಶಪ್ರಾಯರಾಗಿದ್ದೀರಿ. ಈ ಪ್ರಾಮಾಣಿಕ ಸೇವೆಯು ಸಂಸ್ಥೆಗೆ ಗೌರವ ತಂದಿದ್ದು ತಮ್ಮನ್ನು ಅಭಿನಂದಿಸಲಾಗಿದೆ’ ಎಂದು ವ್ಯವಸ್ಥಾಪಕಾ ನಿರ್ದೇಶಕರು ಅಭಿನಂದನಾ ಪತ್ರದಲ್ಲಿ ತಿಳಿಸಿದ್ದಾರೆ.