ಪ್ರಭು ಕ್ಯಾಟರರ್ಸ್ ಮ್ಹಾಲಕ ಪ್ರಭಾಕರ ಪ್ರಭು ನಿಧನ

0

ಪುತ್ತೂರು; ಪ್ರಭು ಕ್ಯಾಟರರ್ಸ್ ಮ್ಹಾಲಕ, ಚಿಕ್ಕಮುಡ್ನೂರು ಬಿಜೆಪಿ ಬೂತ್ ಸಮಿತಿ ಅಧ್ಯಕ್ಷ ಕೆಮ್ಮಾಯಿ ನಿವಾಸಿ ಸೀತಾರಾಮ ಪ್ರಭುರವರ ಪುತ್ರ ಪ್ರಭಾಕರ ಪ್ರಭು(39.ವ) ಆ.22ರಂದ ಸಂಜೆ ಹೃದಯಾಘಾತದಿಂದ ನಿಧನರಾದರು.
ಮನೆಯಲ್ಲೇ ಇದ್ದ ಪ್ರಭಾಕರ ಪ್ರಭು ಸಂಜೆ ವೇಳೆಗೆ ಲೈನ್ ಗೆ ತೆರಳಲು ಸಿದ್ದತೆ ನಡೆಸುತ್ತಿರುವ ಸಂದರ್ಭದಲ್ಲಿ ಕುಸಿದು ಬಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆತರಲಾಗಿದ್ದರೂ ಆಸ್ಪತ್ರೆ ತಲುಪುವಷ್ಟರಲ್ಲಿ ಅವರು ಮೃತಪಟ್ಟಿದ್ದರು ಎಂದು ತಿಳಿದು ಬಂದಿದೆ.
ಮೃತರು ಪತ್ನಿ ರಜನಿ ಓರ್ವ ಪುತ್ರಿ, ತಾಯಿ ಶಾರದಾ, ಸಹೋದರರಾದ ಹರೀಶ್ ಪ್ರಭು, ಸುಧಾಕರ ಪ್ರಭು ಸಹೋದರಿಯರಾದ ಸುಮಿತ್ರಾ ಹಾಗೂ ಸೌಮ್ಯರವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here