ಮಿತ್ತೂರು‌ ಚಂದ್ರಹಾಸ ಪೂಜಾರಿಯವರ ಶ್ರದ್ದಾಂಜಲಿ‌ ಸಭೆ

0

ವಿಟ್ಲ: ಇತ್ತೀಚೆಗೆ ನಿಧನರಾದ ಸುದ್ದಿಬಿಡುಗಡೆ ಪತ್ರಿಕೆಯ ಏಜೆಂಟ್, ಮಿತ್ತೂರು ನಿವಾಸಿ ಚಂದ್ರಹಾಸ ಪೂಜಾರಿಯವರ ಶ್ರದ್ದಾಂಜಲಿ ಸಭೆಯು ಆ.26ರಂದು ಮಿತ್ತೂರಿನ ಅವರ ಸ್ವಗೃಹದಲ್ಲಿ ನಡೆಯಿತು.
ಇಡ್ಕಿದು ಗ್ರಾಮ ಪಂಚಾಯತ್ ಅಧ್ಯಕ್ಷ ಎಂ.ಸುಧೀರ್ ಕುಮಾರ್ ಶೆಟ್ಟಿಯವರು ನುಡಿನಮನ ಸಲ್ಲಿಸಿದರು‌. ಬಳಿಕ ಚಂದ್ರಹಾಸ ಪೂಜಾರಿಯವರ ಭಾವಚಿತ್ರಕ್ಕೆ ನೆರೆದಿದ್ದವರು ಪುಷ್ಪಾರ್ಚನೆ ನಡೆಸಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ರುಕ್ಮಯ ಪೂಜಾರಿ, ವಿಟ್ಲ – ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜಾರಾಮ್ ಕೆ.ಬಿ., ವಿಟ್ಲ – ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಹಿಂದುಳಿದ ಘಟಕದ ಅಧ್ಯಕ್ಷ ಮೋಹನ್ ಗುರ್ಜಿನಡ್ಕ, ಇಡ್ಕಿದು ಗ್ರಾಮ ಪಂಚಾಯತ್ ಸದಸ್ಯರಾದ ಸಂಜೀವ, ರಮೇಶ್, ಕಬಕ ಗ್ರಾ.ಪಂ. ಸದಸ್ಯ ಶಾಬಾ ಕೆ., ನೆಟ್ಲ ಮುಡ್ನೂರು ಗ್ರಾಮ ಪಂಚಾಯತ್ ಸದಸ್ಯ ದನಂಜಯ, ಚಂದ್ರಹಾಸ ಪೂಜಾರಿಯವರ ಪತ್ನಿ ವಿಮಲ, ಪುತ್ರರಾದ ಸಂದೀಪ್ ಎಂ., ಸಂದೇಶ್ ಎಂ., ಪುತ್ರಿಯರಾದ ಶುಭಾ ಎಂ., ಸಂಧ್ಯಾ ಎಂ., ಅಳಿಯಂದಿರಾದ ದಯಾನಂದ ಬೆಳ್ತಂಗಡಿ, ಹೇಮಂತ್ ಊಜಂಪಾಡಿ, ಸೊಸೆಯಂದಿರಾದ ದಿವ್ಯಾ ಸಂದೀಪ್, ಅಕ್ಷತಾ ಸಂದೇಶ್ ಮೊಮ್ಮಕ್ಕಳಾದ ತನುಷ್, ಸುದೀಕ್ಷ, ಆರುಷಿ, ಅಹರ್ಷಿ, ಶ್ಲೋಕ್, ಶಮಿಕ್, ದಿಯಾನ್, ಆಯಾನ್ಶಿ ಹಾಗೂ ಬಂದುಬಳಗದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here