ಕಡಬ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸ್ವಾತಂತ್ರ್ಯೋತ್ಸವದ ನಡಿಗೆ- ಆಲಂಕಾರಿನಲ್ಲಿ ಉದ್ಘಾಟನೆ

0

ಆಲಂಕಾರು: ಕಡಬ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಪ್ರಯುಕ್ತ ಆಲಂಕಾರಿನಿಂದ-ಕಡಬದ ವರೆಗೆ ಸ್ವಾತಂತ್ರ್ಯೋವದ ನಡಿಗೆಗೆ  ಕಾಂಗ್ರೆಸ್ ನ ಜಿಲ್ಲಾಧ್ಯಕ್ಷರು ಹಾಗು ಎಮ್.ಎಲ್.ಸಿ ಹರೀಶ್ ಕುಮಾರ್ ರವರು ಆ.27 ರಂದು ಬೆಳಿಗ್ಗೆ ಆಲಂಕಾರಿನಲ್ಲಿ ಚಾಲನೆ ನೀಡಿದರು. ಮಾಜಿ ಸಚಿವರಾದ ವಿನಯಕುಮಾರ್ ಸೊರಕೆ, ಮಾಜಿ ಶಾಸಕಿ ಶಕುಂತಳಾ ಶೆಟ್ಟಿಯವರು ಸ್ವಾತಂತ್ರ್ಯೋತ್ಸವದ ನಡಿಗೆಯ ಮಹತ್ವ ತಿಳಿಸಿದರು.

ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸುಧೀರ್ ಕುಮಾರ್ ಶೆಟ್ಟಿ ಪ್ರಾಸ್ತವಿಕವಾಗಿ ಮಾತನಾಡಿ ಸ್ವಾಗತಿಸಿದರು.

ಈ ಸಂಧರ್ಭದಲ್ಲಿ ಕೆ.ಪಿ.ಸಿ.ಸಿ ಸದಸ್ಯರಾದ ಡಾ| ರಘು,  ಕೆ.ಪಿ.ಸಿ.ಸಿ. ಸಂಯೋಜಕರಾದ ಕೃಷ್ಣಪ್ಪ.ಜಿ, ಕಾಂಗ್ರೆಸ್ ಮುಖಂಡರಾದ ನಂದಕುಮಾರ್, ಪಿ.ಪಿ ವರ್ಗಿಸ್, ಸರ್ವೊತ್ತಮ ಗೌಡ, ಬಾಲಾಕೃಷ್ಣ ಬಲ್ಲೇರಿ, ಕಾಂಗ್ರೆಸ್ ನ ಪದಾಧಿಕಾರಿಗಳಾದ ರಾಧಾಕೃಷ್ಣ ರೈ ಪರಾರಿಗುತ್ತು, ಕರುಣಾಕರ ಉರ್ಕ, ಅಬ್ದುಲ್ ಕುಂಞಿ ಸೇರಿದಂತೆ ಗ್ರಾ.ಪಂ ಸದಸ್ಯರು, ವಿವಿಧ ಘಟಕದ ಬ್ಲಾಕ್ ಪ್ರತಿನಿಧಿಗಳು, ಬೂತ್ ಪ್ರತಿನಿಧಿಗಳು, ಮಹಿಳಾ ಸದಸ್ಯರು ಹಾಗೂ ಕಾಂಗ್ರೆಸ್‌ ಪ್ರಮುಖರು ಹಾಗೂ ಕಾರ್ಯಕರ್ತರು ಜಾಥಾದಲ್ಲಿ ಪಾಲ್ಗೊಂಡರು.

LEAVE A REPLY

Please enter your comment!
Please enter your name here