‘ಬ್ರಹ್ಮ ಮೊಗೆರ’ಯಕ್ಷಗಾನ ಬಯಲಾಟ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯ ಬಿಡುಗಡೆ ಕಾರ್ಯಕ್ರಮ

0

ಪುತ್ತೂರು:  ಶ್ರೀ ಮಹಾಲಿಂಗೇಶ್ವರ ಬ್ರಹ್ಮ ಮೊಗೇರ ಆರಾಧನಾ ಟ್ರಸ್ಟ್ ಇದರ ವತಿಯಿಂದ ಜನವರಿ 7ರಂದು ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ನಡೆಸಲ್ಪಡುವ ‘ಬ್ರಹ್ಮ ಮೊಗೆರ’ಯಕ್ಷಗಾನ ಬಯಲಾಟ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯ ಬಿಡುಗಡೆ ಕಾರ್ಯಕ್ರಮವನ್ನು ಶ್ರೀ ಮಹಾಲಿಂಗೇಶ್ವರ ದೇವರ ನಡೆಯಲ್ಲಿ ನಡೆಯಿತು
ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಮುಳಿಯ ಕೇಶವ ಭಟ್  ಆಮಂತ್ರಣ ಪತ್ರಿಕೆಯನ್ನು ಬಿಡುಗೊಳಿಸಿ ಶುಭಹಾರೈಸಿದರು.ಈ ಸಂಧರ್ಭದಲ್ಲಿ ರಾಜ್ಯ ಮೊಗೇರ ಸಂಘದ ಗೌರವಾಧ್ಯಕ್ಷ  ನಂದರಾಜ್ ಸಂಕೇಶ್ ,ರಾಜ್ಯ ಮೊಗೇರ ಸಂಘದ ಸಂಘಟನಾ ಕಾರ್ಯದರ್ಶಿ ಜಯಪ್ರಕಾಶ್ ಕನ್ಯಾಡಿ, ಪತ್ರಕರ್ತ ವಿ.ಕೆ ಕಡಬ,ಹಿರಿಯ ಗುರಿಕಾರ ಮೊಂಟ ಮೊಗೇರ ತೆಂಕಿಲ,ಜಗದೀಶ್ ಮಾನ್ಯಡ್ಕ, ಮಹಾಬಲ ಪಡುಬೆಟ್ಟು, ಟ್ರಸ್ಟ್ ನ ಅಧ್ಯಕ್ಷ  ಗಣೇಶ್ ಸಂಪ್ಯ, ಸಂಚಾಲಕ ದಿನೇಶ್ ಬಪ್ಪಳಿಗೆ, ಪ್ರಧಾನ ಕಾರ್ಯದರ್ಶಿ ಪ್ರಸನ್ನ ಉರ್ಲಾಂಡಿ, ಗೌರವಾಧ್ಯಕ್ಷ ಪ್ರಶಾಂತ್ ತ್ಯಾಗರಾಜನಗರ,ಉಪಾಧ್ಯಕ್ಷ ಲೋಕೇಶ್ ಹಿರೇಬಂಡಾಡಿ,ಕೋಶಾಧಿಕಾರಿ ಶಾಂತಪ್ಪ ನರಿಮೊಗರು,ಸಂಘಟನಾ ಕಾರ್ಯದರ್ಶಿ ಲೋಕೇಶ್ ಪಡ್ನೂರು, ಗೌರವ ಸಲಹೆಗಾರರಾದ ವಿಜಯ್ ವಿಕ್ರಂ ರಾಮಕುಂಜ,ಗೋಪಾಲ್ ಬೀಡು, ಕೇಶವ ಕಬಕ,ಸುರೇಶ್ ಕರ್ಗಲ್, ರಂಜಿತ್ ತೆಂಕಿಲ,ನಾಗೇಶ್ ಬೆಳ್ಳಿಪ್ಪಾಡಿ,ಸುಮನ್ ಕಮ್ನರ್,ರಾಜೇಶ್ ಶೇವಿರೆ ಮತ್ತು ಸುಮಾರು ಎಪ್ಪತ್ತಕ್ಕೂ ಹೆಚ್ಚು ಕಾರ್ಯಕಾರಿ ಸದಸ್ಯರು ಉಪಸ್ಥಿತರಿದ್ದರು.ಬಾಲಕೃಷ್ಣ ಕೇಪುಳು ಇವರು ಸ್ವಾಗತಿಸಿ, ವಂದಿಸಿದರು.

LEAVE A REPLY

Please enter your comment!
Please enter your name here