ಬಡಗನ್ನೂರು ಗ್ರಾ.ಪಂ ಸಾಮಾನ್ಯ ಸಭೆ

0

ಬಡಗನ್ನೂರುಃ ಕುಡಿಯುವ ನೀರಿನ ಬಿಲ್ 500 ಕ್ಕಿಂತ ಹೆಚ್ಚು ಮರುಪಾವತಿ  ಬಾಕಿಇದ್ದ ಫಲಾನುಭವಿಗಳ ನೀರಿನ ಸಂಪರ್ಕ ಖಡಿತಗೊಳಿಸುವ ಬಗ್ಗೆ  ಬಡಗನ್ನೂರು ಗ್ರಾ.ಪಂ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಸಭೆಯು  ಗ್ರಾ.ಪಂ ಅಧ್ಯಕ್ಷೆ ಶ್ರೀಮತಿ ಕನ್ನಡ ರವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ ಸಭಾಂಗಣದಲ್ಲಿ ಅ.29 ರಂದು ನಡೆಯಿತು.. ಕುಡಿಯುವ ನೀರಿನ ಸಂಪರ್ಕ ಪಡೆದು ಕೊಂಡ ಫಲಾನುಭವಿಗಳು ಪ್ರತಿ ತಿಂಗಳು ಕಡ್ಡಾಯವಾಗಿ ಬಿಲ್ ಮರುಪಾವತಿ ಮಾಡಬೇಕು. ಆದರೆ ಕೆಲವೊಬ್ಬರು 2- 3 ವರ್ಷಗಳ ಬಿಲ್ ಪಾವತಿ ಮಾಡದೆ ಬಾಕಿ ಇದೆ. ಇದರಿಂದ ಅಭಿವೃದ್ಧಿ ಅನುದಾನದಿಂದ  ವಿದ್ಯುತ್ ಬಿಲ್ ಪಾವತಿ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ.ಆದರಿಂದ    
500 ಕ್ಕಿಂತ ಹೆಚ್ಚುಮರುಪಾವತಿ ಬಾಕಿ ಇದ್ದ ಫಲಾನುಭವಿಗಳ ನೀರಿನ ಸಂಪರ್ಕ ಖಡಿತಗೊಳಿಸುವ ಬಗ್ಗೆ  ಸರ್ವಸದಸ್ಯರ ಒಮ್ಮತದಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ವಸತಿ ರಹಿತ ಫಲಾನುಭವಿಗಳ  ಸಂಖ್ಯೆ ಹೆಚ್ಚಾಗಿರುವುದರಿಂದ  ಪಂಚಾಯತ್ ನಿವೇಶನ ಜಾಗವನ್ನು ಹಂಚಿಕೆ ಮಾಡಿಕೊಡುವ ಬಗ್ಗೆ ಉಪಾಧ್ಯಕ್ಷ ಸಂತೋಷ್ ಆಳ್ವ  ಅಭಿವೃದ್ಧಿ ಅಧಿಕಾರಿ ವಸೀಮ ಗಂಧದ ರವರ ಗಮನಕ್ಕೆ ತಂದರು.
ಬೆಳಕು ಯೋಜನೆ ಅವಧಿ ವಿಸ್ತರಣೆ ಮಾಡಲು ಸಂಬಂಧ ಪಟ್ಟ ಮಸ್ಕಾಂ ಇಲಾಖಾಧಿಕಾರಿಗಳಿಗೆ ಬರೆಯಲು ನಿರ್ಣಯ ಕೈಗೊಳ್ಳಲಾಯಿತು.
ಬಡಗನ್ನೂರು ಗ್ರಾಮದ ಇಬ್ಬರೂ ಲೈನ್ ಮೇನ್ ಭಡ್ತಿ ಹೊಂದಿ ವರ್ಗಾವಣೆ ಒಬ್ಬರು ಊರಿಗೆ ಹೋಗಿದ್ದಾರೆ ಇನ್ನೊಬ್ಬರು ಕುಂಬ್ರ ಭಾಗಕ್ಕೆ ಹೋಗಿದ್ದಾರೆ.  ಹೊಸದಾಗಿ ಬಂದ ಲೈನ್ ಮೇನ್ ಇವರಿಗೆ  ಟಿ.ಸಿ ಇದ್ದ, ಸ್ಥಳಕ್ಕೆ ಹಾಗೂ ಲೈನ್ ಸಮಸ್ಯೆ ಇದ್ದ ಭಾಗಕ್ಕೆ ದಾರಿ ತೋರಿಸಿ ಸಾಕಗಿದೆ. ಇದರಿಂದ ಕುಂಬ್ರ ಭಾಗಕ್ಕೆ ಲೈನ್ ಮೇನ್ ಆಗಿ ಭಡ್ತಿ ಹೊಂದಿ ವರ್ಗಾವಣೆ ಗೊಂಡಿರುವ ಸೈದು ಇವರನ್ನು ಪುನಃ ಬಡಗನ್ನೂರು ಗ್ರಾಮಕ್ಕೆ ವರ್ಗಾವಣೆ ಮಾಡುವಂತೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಬರೆಯಲು ಸದಸ್ಯ ಲಿಂಗಪ್ಪ ಗೌಡ ಮೋಡಿಕೆ ಒತ್ತಾಯಿಸಿದರು. ಈ ಬಗ್ಗೆ ಚರ್ಚಿಸಿ ಸಂಬಂಧ ಪಟ್ಟ ಅಧಿಕಾರಿಗಳಿಗೆ ಬರೆಯಲು ನಿರ್ಣಯ ಕೈಗೊಳ್ಳಲಾಯಿತು. 
ಸಭೆಯಲ್ಲಿ  ಸದಸ್ಯರಾದ ರವಿರಾಜ ರೈ ಸಜಂಕಾಡಿ, ಕುಮಾರ ಅಂಬಟೆಮೂಲೆ, ವಸಂತ ಗೌಡ ಕನ್ನಯ, ವೆಂಕಟೇಶ್ ಕನ್ನಡ್ಕ, ಲಿಂಗಪ್ಪ ಗೌಡ ಮೋಡಿಕೆ, ಧರ್ಮೇಂದ್ರ ಕುಲಾಲ್ ಪದಡ್ಕ, ಕಲಾವತಿ ಗೌಡ ಪಟ್ಲಡ್ಕ, ಜ್ಯೋತಿ ಅಂಬಟೆಮೂಲೆ, ದಮಯಂತಿ ನೆಕ್ಕರೆ, ಸವಿತಾ ನೆರೋತ್ತಡ್ಕ, ಸುಶೀಲ ಪಕ್ಯೊಡ್, ಹೇಮಾವತಿ ಮೋಡಿಕೆ, ಸುಜಾತ ಎಂ, ಹಾಗೂ ಪುಷ್ಪಲತಾ ದೇವಕಜೆ ಉಪಸ್ಥಿತರಿದ್ದರು.ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ವಸೀಮ ಗಂಧದ ಸರಕಾರಿ ಸುತ್ತೋಲೆ ಹಾಗೂ ಸಾರ್ವಜನಿಕ ಅರ್ಜಿಗಳನ್ನು ಸಭೆಯ ಮುಂದಿಟ್ಟರು.  ಗುಮಾಸ್ತ ಜಯಾಪ್ರಸಾದ್  ರೈ ಕುತ್ಯಾಳ ಸ್ವಾಗತಿಸಿ, ವಂದಿಸಿದರು ಸಿಬ್ಬಂದಿಗಳು ಸಹಕರಿಸಿದರು.

LEAVE A REPLY

Please enter your comment!
Please enter your name here