ಆಲಂಕಾರು: ಕತ್ತಿಯಿಂದ ಕಡಿದು ಜೀವ ಬೆದರಿಕೆ -ದೂರು

0

ಕಡಬ: ಕತ್ತಿಯಿಂದ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿರುವುದಾಗಿ ಆರೋಪಿಸಿ ಆಲಂಕಾರು ಕಲ್ಲೇರಿ ನಿವಾಸಿ ಜಯಕರ ಪೂಜಾರಿ ಎಂಬವರು ನೀಡಿದ ದೂರಿನ ಮೇರೆಗೆ ಭಾಸ್ಕರ ಎಂಬವರ ವಿರುದ್ಧ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಬಗ್ಗೆ ಕಡಬ ಪೊಲೀಸರಿಗೆ ದೂರು ನೀಡಿರುವ ಜಯಕರ ಪೂಜಾರಿಯವರು, `ನಾನು ಆಲಂಕಾರು ಪೇಟೆಯಲ್ಲಿ ಹೋಟೆಲ್ ಉದ್ಯಮ ಮಾಡಿಕೊಂಡಿದ್ದು ಆ.31ರಂದು ಸಂಜೆ 5.35ರ ವೇಳೆಗೆ ಆರೋಪಿತನಾದ ಭಾಸ್ಕರರವರು ಹೋಟೆಲ್‌ಗೆ ಮದ್ಯದ ಬಾಟಲಿಯನ್ನು ಹಿಡಿದುಕೊಂಡು ಬಂದು ಸೋಡಾ ಕೊಡುವಂತೆ ಕೇಳಿದಾಗ ಇಲ್ಲಿ ಮದ್ಯ ಕುಡಿಯ ಬೇಡಿ ಎಂದು ಹೇಳಿದಾಗ ಆರೋಪಿಯು ಬಿಡದೇ ಸೋಡಾವನ್ನು ತೆಗೆದುಕೊಂಡು ಅಲ್ಲಿಯೇ ಗ್ಲಾಸ್‌ನಲ್ಲಿ ಹಾಕಿಕೊಂಡು ಮದ್ಯ ಸೇವನೆ ಮಾಡಿದ್ದು ಬಳಿಕ ಆತನಿಗೆ ವಾಂತಿ ಬಂದು ವಾಂತಿ ಮಾಡುವಾಗಲೂ ಇಲ್ಲಿ ವಾಂತಿ ಮಾಡಬೇಡ ಎಂದು ಹೇಳಿದಾಗ ಒಂದು ಸೊಡಾಕ್ಕೆ ಹತ್ತು ರೂಪಾಯಿ ತೆಗೆದುಕೊಳ್ಳುತ್ತೀಯಾ ಎಂದು ಬೈದ ವೇಳೆ ನಮ್ಮೊಳಗೆ ಜಗಳವಾಗಿದೆ. ಈ ವೇಳೆ ಆರೋಪಿಯು ಹೊರಗೆ ಹೋಗಿ ಆತನ ಆಟೋರಿಕ್ಷಾದಲ್ಲಿದ್ದ ಕತ್ತಿಯನ್ನು ತೆಗೆದುಕೊಂಡು ಬಂದು ಹೋಟೆಲ್‌ನಲ್ಲಿದ್ದ ನನಗೆ ಕಡಿದಿದ್ದು ನಾನು ಹಿಂದೆ ಸರಿದಿದ್ದರಿಂದ ಕತ್ತಿಯು ಎಡ ಕೈಗೆ ತಾಗಿ ಗಾಯವಾಗಿದೆ. ನಂತರ ಆರೋಪಿಯು ಸೆ.1ರಂದು ಬೆಳಗ್ಗೆ 10 ಗಂಟೆಗೆ ಮತ್ತೆ ಹೋಟೇಲ್‌ಗೆ ಬಂದು ನಿಮ್ಮನ್ನು ಕೊಲ್ಲದೇ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿರುತ್ತಾನೆ’ ಎಂದು ತಿಳಿಸಿದ್ದಾರೆ. ಈ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಕಲಂ: 504,324,506ರಂತೆ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here