ಅಶೋಕ್ ರೈಯವರಿಂದ ಮುಂದುವರಿದ ಬಡವರ ಪರವಾದ ಸೇವಾ ಕಾರ್ಯ

0

ಅರಿಯಡ್ಕ: ಕುಸಿಯುವ ಭೀತಿಯಲ್ಲಿರುವ ಮನೆಗೆ ಅಶೋಕ್ ರೈ ಭೇಟಿ-ಛಾವಣಿ ದುರಸ್ತಿಗೆ ಆರ್ಥಿಕ ನೆರವಿನ ಭರವಸೆ

ಪುತ್ತೂರು: ಉದ್ಯಮಿ, ಕೋಡಿಂಬಾಡಿ ರೈ ಎಸ್ಟೇಟ್ ಎಜುಕೇಶನಲ್ & ಚಾರಿಟೇಬಲ್ ಟ್ರಸ್ಟ್‌ನ ಮುಖ್ಯ ಪ್ರವರ್ತಕರಾಗಿರುವ ಅಶೋಕ್ ಕುಮಾರ್ ರೈ ಅವರು ಬಡವರ ಪರವಾದ ತಮ್ಮ ಸೇವಾ ಕಾರ್ಯವನ್ನು ಮುಂದುವರಿಸಿದ್ದು ಅರಿಯಡ್ಕ ಗ್ರಾಮದ ಕುತ್ಯಾಡಿ ನಿವಾಸಿ ಸುಶೀಲರವರ ಕುಸಿಯುವ ಭೀತಿಯಲ್ಲಿರುವ ಮನೆಗೆ ಭೇಟಿ ನೀಡಿ ಛಾವಣಿ ದುರಸ್ತಿಗೆ ಆರ್ಥಿಕ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ.

ಸುಶೀಲರವರ ಪತಿ ಮರಣ ಹೊಂದಿದ್ದು ಛಾವಣಿ ಕುಸಿಯುವ ಹಂತದಲ್ಲಿರುವ ಮನೆಯಲ್ಲಿ ಸುಶೀಲ ಒಬ್ಬರೇ ವಾಸಿಸುತ್ತಿದ್ದಾರೆ. ಕೂಲಿ ಕೆಲಸ ಮಾಡಿ ಜೀವನ ನಡೆಸುತ್ತಿರುವ ಇವರಿಗೆ ಮನೆ ದುರಸ್ತಿ ಮಾಡುವುದು ಅಸಾಧ್ಯವಾಗಿದೆ. ಈ ಪರಿಸ್ಥಿತಿಯನ್ನು ಸುಶೀಲರವರು ಅಶೋಕ್ ಕುಮಾರ್ ರೈಯವರಲ್ಲಿ ತಿಳಿಸಿದ್ದು ಬಳಿಕ ಅಶೋಕ್ ರೈಯವರು ಖುದ್ದಿ ಸುಶೀಲರವರ ಮನೆಗೆ ಭೇಟಿ ನೀಡಿ ಮನೆಯ ಛಾವಣಿಯನ್ನು ವೀಕ್ಷಿಸಿ ಮತ್ತು ಛಾವಣಿ ದುರಸ್ಥಿಗೊಳಿಸಲು ಆರ್ಥಿಕ ಸಹಾಯ ನೀಡುವುದಾಗಿ ಭರವಸೆ ನೀಡಿದರು.

ಅಶೋಕ್ ರೈ ಅವರು ನಿರಂತರವಾಗಿ ಬಡವರ ಪರವಾಗಿ ಕಾರ್ಯ ನಿರ್ವಹಿಸುತ್ತಿದ್ದು ಇತ್ತೀಚೆಗೆ ಗ್ರಾಮಾಂತರ ಪ್ರದೇಶದಲ್ಲಿ ಹಲವಾರು ಬಡವರಿಗೆ ಮನೆಯ ಛಾವಣಿ ದುರಸ್ತಿಗೆ ನೆರವು ನೀಡುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

LEAVE A REPLY

Please enter your comment!
Please enter your name here