ಪುತ್ತೂರು ಪಿಎಲ್‌ಡಿ ಬ್ಯಾಂಕ್ ವ್ಯವಸ್ಥಾಪಕ ಬಾಲಕೃಷ್ಣ ಸೇವಾ ನಿವೃತ್ತಿ

0

ಪುತ್ತೂರು: ಪುತ್ತೂರು ಪಿಎಲ್‌ಡಿ ಬ್ಯಾಂಕಿನ ವ್ಯವಸ್ಥಾಪಕ ಬಾಲಕೃಷ್ಣ ಪಿ ರವರು ಆ. 31ರಂದು ಸೇವಾ ನಿವೃತ್ತಿ ಹೊಂದಿದ್ದಾರೆ. ಬ್ಯಾಂಕಿಗೆ 1985ರಲ್ಲಿ ಗುಮಾಸ್ತರಾಗಿ ಸೇವೆಗೆ ಸೇರಿದ್ದ ಇವರು 2022 ರಿಂದ ಬ್ಯಾಂಕಿನ ಕಡಬ ಶಾಖಾ ವ್ಯವಸ್ಥಾಪಕರಾಗಿ, 2020 ರಿಂದ ಬ್ಯಾಂಕಿನ ಪ್ರಧಾನ ಕಚೇರಿ ಪುತ್ತೂರಿನಲ್ಲಿ ವ್ಯವಸ್ಥಾಪಕರಾಗಿ ಸೇವೆಗೈದಿದ್ದಾರೆ. ಇವರು ಬ್ಯಾಂಕಿನಲ್ಲಿ ಒಟ್ಟು 37 ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದರು. ಬಾಲಕೃಷ್ಣರವರು ಹಿರೇಬಂಡಾಡಿಯಲ್ಲಿ ಪ್ರಾಥಮಿಕ, ಉಪ್ಪಿನಂಗಡಿಯ ಸ.ಪ.ಪ.ಪೂರ್ವ ಕಾಲೇಜಿನಲ್ಲಿ ಪ್ರೌಢ ಮತ್ತು ಪಿಯುಸಿ ಹಾಗೂ ಪುತ್ತೂರು ಸಂತ ಫಿಲೋಮಿನಾ ಕಾಲೇಜಿನಲ್ಲಿ ಬಿ.ಕಾಂ ಪದವಿಯನ್ನು ಪಡೆದಿರುತ್ತಾರೆ.

ಬಾಲಕೃಷ್ಣ ಪಿರವರು ಪತ್ನಿ ವಾರಿಜ, ಪುತ್ರ ಪ್ರಸಾದ್ ಪಿ, ಪುತ್ರಿ ಉಷಾ ಪಿರವರೊಂದಿಗೆ ಉಪ್ಪಿನಂಗಡಿ ಹಿರೇಬಂಡಾಡಿಯ ಪಡೀಲಿನಲ್ಲಿ ವಾಸವಾಗಿದ್ದಾರೆ.

LEAVE A REPLY

Please enter your comment!
Please enter your name here