ಬೆಟ್ಟಂಪಾಡಿ: ನವಚಂಡಿಕಾ ಯಾಗ, 10 ನೇ ವರ್ಷದ ಸಾಮೂಹಿಕ ದುರ್ಗಾಪೂಜೆಯ ಆಮಂತ್ರಣ ಪತ್ರ ಬಿಡುಗಡೆ

0

ಬೆಟ್ಟಂಪಾಡಿ: ವಿಶ್ಚಹಿಂದು ಪರಿಷದ್, ಭಜರಂಗದಳ, ಮಾತೃಮಂಡಳಿ, ದುರ್ಗಾವಾಹಿನಿ ವತಿಯಿಂದ ನವಚಂಡಿಕಾ ಯಾಗ ಮತ್ತು 10 ನೇ ವರ್ಷದ ಸಾಮೂಹಿಕ ದುರ್ಗಾಪೂಜೆ ಸೆ. 27 ರಂದು ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ನಡೆಯಲಿದ್ದು, ಇದರ ಆಮಂತ್ರಣ ಪತ್ರ ಬಿಡುಗಡೆ ಸೆ. 4 ರಂದು ಶ್ರೀ ಕ್ಷೇತ್ರದಲ್ಲಿ ನಡೆಯಿತು. ದೇವಳದ ಅನುವಂಶಿಕ ಆಡಳಿತ‌ ಮೊಕ್ತೇಸರ ವಿನೋದ್ ಕುಮಾರ್ ಬಲ್ಲಾಳ್ ಆಮಂತ್ರಣ ಪತ್ರ ಬಿಡುಗಡೆಗೊಳಿಸಿದರು.‌ ಅರ್ಚಕ ದಿವಾಕರ ಭಟ್ ಪ್ರಾರ್ಥಿಸಿದರು. ಸಂಚಾಲಕ ಕರುಣಾಕರ ಶೆಟ್ಟಿ ಕೊಮ್ಮಂಡ ಕಾರ್ಯಕ್ರಮದ ರೂಪುರೇಷೆಯ ಬಗ್ಗೆ ಪ್ರಸ್ತಾವನೆಗೈದರು. ಕಾರ್ಯಕರ್ತರು ಪಾಲ್ಗೊಂಡರು.

ಕಾರ್ಯಕ್ರಮ ಸಮಿತಿ ರಚನೆ

ಇದೇ ವೇಳೆ ನವಚಂಡಿಕಾಯಾಗ ಮತ್ತು ದುರ್ಗಾಪೂಜೆಯ ಕಾರ್ಯಕ್ರಮದ ವಿವಿಧ ಜವಾಬ್ದಾರಿ ನಿರ್ಚಹಿಸಲು ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷ ಜಗನ್ನಾಥ ರೈ ಕೊಮ್ಮಂಡ ಕಾರ್ಯಕ್ರಮ ಸಂಘಟಿಸುವ‌ ಕುರಿತಾಗಿ ಮಾತನಾಡಿದರು. ಪ್ರಿಯದರ್ಶಿನಿ ಶಾಲಾ ಮುಖ್ಯಗುರು, ಸಮಿತಿಯ ಕಾರ್ಯದರ್ಶಿ ರಾಜೇಶ್ ನೆಲ್ಲಿತ್ತಡ್ಕ ನಿರ್ವಹಿಸಿದರು.

LEAVE A REPLY

Please enter your comment!
Please enter your name here