ನರಿಮೊಗರು- ಎಡಮಂಗಲ ನಡುವೆ ರೈಲ್ವೇ ಹಳಿಯಲ್ಲಿದ್ದ ವ್ಯಕ್ತಿಯನ್ನು ಕಾಪಾಡಲು ರೈಲಿನ ವೇಗ ಕಡಿಮೆ ಮಾಡಿ ಸಮಯಪ್ರಜ್ಞೆ ಮೆರೆದ ಪೈಲಟ್

0

ರೈಲು ತಾಗಿ ತೀವ್ರ ಗಾಯಗೊಂಡ ವ್ಯಕ್ತಿಯನ್ನು ಅದೇ ರೈಲಿನಲ್ಲಿ ಪುತ್ತೂರು ರೈಲ್ವೇ ನಿಲ್ದಾಣಕ್ಕೆ ತಂದು ಆ್ಯಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ಸೇರಿಸಿದ ರೈಲ್ವೇ ಟಿಕೇಟ್ ಇನ್ಸಪೆಕ್ಟರ್ ವಿಠಲ್ ನಾಯಕ್ ತಂಡ
ಪುತ್ತೂರು: ಬೆಂಗಳೂರಿನಿಂದ ಕಾರವಾರಕ್ಕೆ ಹೋಗುತ್ತಿದ್ದ ಪ್ರಯಾಣಿಕ ರೈಲು ನರಿಮೊಗರು ಮತ್ತು ಎಡಮಂಗಲ ನಡುವೆ ರೈಲ್ವೇ ಹಳಿಯಲ್ಲಿ ವ್ಯಕ್ತಿಯೊಬ್ಬರು ಇರುವುದನ್ನು ಗಮನಿಸಿ ತಕ್ಷಣ ರೈಲನ್ನು ನಿಲ್ಲಿಸಲಾಗಿದ್ದರೂ ರೈಲಿನ ವೇಗ ಕಡಿಮೆ ಮಾಡಿ ವ್ಯಕ್ತಿಯ ಪ್ರಾಣ ಉಳಿಸಿದ ಘಟನೆ ಸೆ.5 ರ ಸಂಜೆ ನಡೆದಿದ್ದು, ತೀವ್ರ ಗಾಯಗೊಂಡ ವ್ಯಕ್ತಿಯನ್ನು ಅದೇ ರೈಲಿನಲ್ಲಿ ಪುತ್ತೂರು ರೈಲ್ವೇ ನಿಲ್ದಾಣಕ್ಕೆ ತಂದು ಬಳಿಕ ಆ್ಯಂಬುಲೆನ್ಸ್ ನಲ್ಲಿ ಪುತ್ತೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಬೆಂಗಳೂರಿನಿಂದ ಪುತ್ತೂರು ರೈಲ್ವೇ ನಿಲ್ದಾಣವಾಗಿ ಕಾರವಾರಕ್ಕೆ ಬರುತ್ತಿದ್ಧ ಪ್ರಯಾಣಿಕ ರೈಲು ನರಿಮೊಗು ಮತ್ತು ಎಡಮಂಗಲ ಮಧ್ಯೆ ಬರುತ್ತಿದ್ದಂತೆ ಸುಮಾರು ೪೫ ವರ್ಷದ ವ್ಯಕ್ತಿಯೊಬ್ವರು ರೈಲ್ವೇ ಹಳಿಯನ್ನು ಹೋಗುತ್ತಿರುವುದನ್ನು ಗಮನಿಸಿದ ರೈಲಿನ ಪೈಲೆಟ್ ವೇಗದಲ್ಲಿದ್ದ ರೈಲನ್ನು ತಕ್ಷಣ ನಿಲ್ಲಿಸಲಾಗಿದ್ದರೂ ರೈಲಿನ ವೇಗವನ್ನು ಕಡಿಮೆಗೊಳಿಸಿದ್ದಾರೆ. ಹಾಗಾಗಿ ರೈಲು ವ್ಯಕ್ತಿಗೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ವ್ಯಕ್ತಿಯ ತಲೆಗೆ ಗಂಭೀರ ಗಾಯವಾಗಿದ್ದು‌. ಅಲ್ಲಿ ತಕ್ಷಣಕ್ಕೆ ಯಾವ ವ್ಯವಸ್ಥೆಯು ಇಲ್ಲದ ಹಿನ್ನಲೆಯಲ್ಲಿ ಅದೇ ರೈಲಿನಲ್ಲಿದ್ದ ರೈಲ್ವೇ ಟಿಕೇಟ್ ಇನ್ ಸ್ಪೆಕ್ಟರ್ ವಿಠಲ್ ನಾಯಕ್ ಮತ್ತು ಗಾರ್ಡ್ ಗಳು  ಗಾಯಳುವನ್ನು ಪ್ರಯಾಣಿಕ ರೈಲಿನಲ್ಲಿ ಪುತ್ತೂರು ರೈಲ್ವೇ ನಿಲ್ದಾಣಕ್ಕೆ ಕರೆದು‌ಕೊಂಡು ಬಂದರು. ಈ ನಡುವೆ ವಿಠಲ್ ನಾಯಕ್ ಅವರು ಪುತ್ತೂರು ರೈಲ್ವೇ ಸ್ಟೇಷನ್ ಮಾಸ್ಟರ್ ಹರಿಚರಣ್ ಯಾದವ್ ಅವರಿಗೆ ವಯರ್ ಲೆಸ್ ಸಂಪರ್ಕದಲ್ಲಿ ಮಾಹಿತಿ ನೀಡಿದ್ದರು. ಸ್ಟೇಷನ್ ಮಾಸ್ಟರ್ 108 ಆ್ಯಂಬುಲೆನ್ಸ್ ಗೆ ಕರೆ ಮಾಡಿದ್ರು. ಹಾಗಾಗಿ ರೈಲು ಪುತ್ತೂರಿಗೆ ತಲುಪುತ್ತಲೇ ರೈಲಿನಿನಂದ ಗಾಯಾಳುವನ್ನು ಆ್ಯಂಬುಲೆನ್ಸ್ ಮೂಲಕ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಒಟ್ಟಿನಲ್ಲಿ ರೈಲ್ವೇ ಪೈಲಟ್ ನ ಸಮಯಪ್ರಜ್ಞೆಯಿಂದ ಮತ್ತು ರೈಲ್ವೇ ಅಧಿಕಾರಿಗಳ ಟೀಮ್ ವರ್ಕ್ ನಿಂದಾಗಿ ವ್ಯಕ್ತಿಯೊಬ್ವರ ಪ್ರಾಣ ಉಳಿದಿದೆ‌.

LEAVE A REPLY

Please enter your comment!
Please enter your name here