ಐಕಳ ಹರೀಶ್ ಶೆಟ್ಟಿ ಅವರಿಗೆ ಅಣಿಲೆ ವೆಂಕಪ್ಪ ರೈ ಪ್ರಶಸ್ತಿ ಪ್ರದಾನ

0

ಪುತ್ತೂರು: ದಂಬೆಕಾನ ಸದಾಶಿವ ರೈ ಸ್ಥಾಪಿತ ಪಿ ಬಿ ರೈ ಪ್ರತಿಷ್ಠಾನದಿಂದ ಪ್ರತೀ ವರ್ಷ ನೀಡಲ್ಪಡುವ ಅಣಿಲೆ ವೆಂಕಪ್ಪ ರೈ ಪ್ರಶಸ್ತಿಯನ್ನು ಮೂಲ್ಕಿ ಬಂಟರ ಭವನದಲ್ಲಿ ಯಾವುದೇ ಜಾತಿ  ಮತ, ಧರ್ಮ ನೋಡದೆ ಸುಮಾರು 12 ಕೋಟಿಗೂ ಮಿಕ್ಕಿದ ಮೊತ್ತವನ್ನು ಸಂಗ್ರಹಿಸಿ ಸಾಮಾಜಿಕ ಸೇವೆಗಾಗಿ ವ್ಯಯಿಸಿರುವ ಧೀಮಂತ ನಾಯಕ, ಅಪ್ರತಿಮ ಸಂಘಟಕರು ಆಗಿರುವ ಜಾಗತಿಕ ಬಂಟರ ಸಂಘಗಳ ಒಕ್ಕೂಟ ದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅವರಿಗೆ ನೀಡಲಾಯಿತು.

ಪಿ ಬಿ ರೈ ಪ್ರತಿಸ್ಥಾನದ ಗೌರವಾಧ್ಯಕ್ಷ ಬಂಟರ ಯಾನೆ ನಾಡವರ ಮಾತೃಸಂಘದ ಉಪಾಧ್ಯಕ್ಷ ಕಾವು ಹೇಮನಾಥ್ಶೆಟ್ಟಿ ಮತ್ತು  ಅನಿತಾ ಹೇಮನಾಥ್ ಶೆಟ್ಟಿ ದಂಪತಿ ಪ್ರದಾನ ಮಾಡಿದರು.

ಪುತ್ತೂರು ತಾಲೂಕು ಬಂಟರ ಸಂಘದ ನಿರ್ದೇಶಕ ಎ ಕೆ ಜಯರಾಮ ರೈ, ಪುತ್ತೂರು ಯುವ ಬಂಟರ ಸಂಘದ ಪದಾಧಿಕಾರಿಗಳಾದ ಬೊಳಿಂಜ ಗುತ್ತು ರವಿಪ್ರಸಾದ್ ಶೆಟ್ಟಿ ಹಾಗೂ ಕೆ ಸಿ ಅಶೋಕ್ ಶೆಟ್ಟಿ ಈ ಸಂದರ್ಭದಲ್ಲಿ ಜೊತೆಗಿದ್ದರು.

LEAVE A REPLY

Please enter your comment!
Please enter your name here