ಸವಣೂರು ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘಕ್ಕೆ ರೂ.1.17, ಕೋಟಿ ಲಾಭ – ಗಣೇಶ್ ನಿಡ್ವಣ್ಣಾಯ

0

ಪುತ್ತೂರು: ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 2021-22ನೇ ಸಾಲಿನ ಆಡಿಟ್ ನಡೆದು ಸತತ 20ನೇ ಬಾರಿಗೆ “ಎ” ತರಗತಿ ಆಡಿಟ್ ವರ್ಗೀಕರಣದೊಂದಿಗೆ 99.25 ಶೇಕಡಾ ಸಾಲ ವಸೂಲಾತಿಯೊಂದಿಗೆ ರೂ.1.17 ಕೋಟಿ ಲಾಭಗಳಿಸಿದ್ದು , ಸಂಘವು ಸತತ 11 ವರ್ಷಗಳಿಂದ ಡಿಸಿಸಿ ಬ್ಯಾಂಕ್ ಪ್ರಶಸ್ತಿಗೆ ಬಾಜನವಾಗಿದೆ. ಈ ಅಭಿವೃದ್ದಿಗೆ ಸಹಕರಿಸಿದ ಸಮಸ್ತ ಸದಸ್ಯರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಸಂಘದ ಅದ್ಯಕ್ಷ ಗಣೇಶ್ ನಿಡ್ವಣ್ಣಾಯ ರವರು ತಿಳಿಸಿದ್ದಾರೆ.

                                                               ಗಣೇಶ್ ನಿಡ್ವಣ್ಣಾಯ

ಸಂಘದಲ್ಲಿ 3312 ಸದಸ್ಯರಿದ್ದು , ರೂ. 4.87 ಕೋಟಿ ಪಾಲುಬಂಡವಾಳ ಮತ್ತು ರೂ. 28.10 ಕೋಟಿ ಠೇವಣಿ ಸಂಗ್ರಹಿಸಲಾಗಿದೆ. ವರದಿ ವರ್ಷದಲ್ಲಿ ಅಲ್ಪಾವಧಿ, ಮದ್ಯಮಾವಧಿ, ದೀರ್ಘಾವಧಿ ಕೃಷಿ ಸಾಲ, ಕೃಷಿಯೇತರ ಸಾಲ , ಚಿನ್ನಾಭರಣ ಈಡಿನ ಸಾಲ, ಸ್ವಸಹಾಯ ಗುಂಪು ಸಾಲ, ಇತ್ಯಾದಿಗಳಿಗೆ ರೂ 47.83 ಕೋಟಿ ಸಾಲ ವಿತರಿಸಲಾಗಿದೆ. ಕೇಂದ್ರ ಬ್ಯಾಂಕಿನಿಂದ ರೂ. 28.52 ಕೋಟಿ ಸಾಲ ಪಡೆಯಲಾಗಿದೆ. ಆರ್ಥಿಕವಾಗಿ ಸಂಕಷ್ಟದಲ್ಲಿರುವ ಸುಮಾರು 17 ಸದಸ್ಯರಿಗೆ ತಲಾ ರೂ.5000/-ದಂತೆ ರೂ.85,000 ವಿತರಿಸಲಾಗಿದೆ. ನವೋದಯದ ಚೈತನ್ಯ ವಿಮಾ ಯೋಜನೆಯಡಿ 27 ಸದಸ್ಯರಿಗೆ ರೂ. 1,92,000/- ಕ್ಲ್ಯೆಂ ಬಂದಿರುತ್ತದೆ.

ಮಾಸ್ ಲಿ. ಮಂಗಳೂರು ಇವರ ಸಹಯೋಗದೊಂದಿಗೆ ರೂ, 5.62 ಕೋಟಿ ಮೌಲ್ಯದ ರೈತರ ಅಡಿಕೆ ಖರೀದಿಸಲಾಗಿದೆ, ಬ್ಯಾಂಕಿಂಗ್ ವ್ಯವಹಾರದ ಜೊತೆಗೆ ಪಡಿತರ ಮತ್ತು ರಸಗೊಬ್ಬರ ವಿತರಿಸಲಾಗುತ್ತಿದೆ.

ಕೋವಿಡ್-19 ಲಾಕ್-ಡೌನ್ ಸಮಯದಲ್ಲಿ ಜನತೆಗೆ ಸಹಕರಿಸಿದ ಸಂಘದ ಕಾರ್‍ಯವ್ಯಾಪ್ತಿಯ 13 ಆಶಾಕಾಯಕರ್ತೆಯರಿಗೆ ನಗದು ಪುರಸ್ಕಾರದೊಂದಿಗೆ ಗೌರವಿಸಲಾಗಿದೆ. ಲಾಕ್-ಡೌನ್ ಸಮಯದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳ ಪಡಿತರ ವ್ಯವಸ್ಥೆಯನ್ನು ರಜಾದಿನ ಮತ್ತು ವ್ಯವಹಾರ ಸಮಯ ಮೀರಿ ಅತ್ಯಂತ ಯಶಸ್ವಿಯಾಗಿ ವಿತರಿಸಲಾಗಿದೆ ಎಂದು ಗಣೇಶ್ ನಿಡ್ವಣ್ಣಾಯರವರು ತಿಳಿಸಿದ್ದಾರೆ.

ಸೆ. 10 ರಂದು ಸಂಘದ ಮಹಾಸಭೆ
ಸೆ. 10 ರಂದು ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಹಾಸಭೆ ಬೆಳಿಗ್ಗೆ 9.30 ರಿಂದ ಸಂಘದ ಸ್ವಾಮಿ ವಿವೇಕಾನಂದ ಸಭಾಂಗಣದಲ್ಲಿ ನಡೆಯಲಿದ್ದು, ಪ್ರತಿ ವರ್ಷದಂತೆ ಈ ವರ್ಷ ಕೂಡ ಸಂಘದ ಕಾರ್ಯವ್ಯಾಪ್ತಿಯಲ್ಲಿ ಬರುವ ಎಸ್.ಎಸ್.ಎಲ್.ಸಿ, ಪಿ.ಯು.ಸಿ ಮತ್ತು ಡಿಗ್ರಿಯ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಗೌರವಧನದೊಂದಿಗೆ ಪುರಸ್ಕರಿಸಲಾಗುವುದು ಎಂದು ಸಂಘದ ಅಧ್ಯಕ್ಷ ಗಣೇಶ್ ನಿಡ್ವಣ್ಣಾಯ ಎನ್ ಕುಮಾರಮಂಗಲ, ಉಪಾಧ್ಯಕ್ಷ ತಾರಾನಾಥ ಕಾಯರ್ಗ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಪಿ,ರವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here