ಇಂದ್ರಪ್ರಸ್ಥ ವಿದ್ಯಾಲಯದ ಬಾಲಕರ ತ್ರೋಬಾಲ್ ತಂಡ ಮೈಸೂರು ವಿಭಾಗೀಯ ಮಟ್ಟಕ್ಕೆ ಆಯ್ಕೆ

0

ಉಪ್ಪಿನಂಗಡಿ : ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಸಂತ ಪಾವ್ಲರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ನಾರಾವಿ ಬೆಳ್ತಂಗಡಿ ಇಲ್ಲಿ ನಡೆದ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಇಲ್ಲಿನ ಇಂದ್ರಪ್ರಸ್ಥ ವಿದ್ಯಾಲಯದ 17ರ ವಯೋಮಾನದ ಬಾಲಕರ ವಿಭಾಗದಲ್ಲಿ ಪ್ರಥಮ ಸ್ಥಾನವ ಪಡೆಯುವುದರೊಂದಿಗೆ ಮೈಸೂರು ವಿಭಾಗೀಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ . ಈ ತಂಡದಲ್ಲಿ 10 ನೇ ತರಗತಿಯ ಐಮನ್ ಶಾಫಿ, ಅನೂಪ್ ಶೆಣೈ, ಭುವನ್ ಬೆದ್ರಾ, ಯಕ್ಷಿತ್, ರಚನ್ ಆರ್. ಕೆ , ಐಮನ್ ಕೆ. ಎ, ಅಬ್ದುಲ್ ಫತ್ಹಾ, ಎಂ.ಕೆ ಮಹಮ್ಮದ್ ಅಜ್ವದ್, ಶಮಿತ್ ಸಾದ್, ನಿದೀಶ್ ಐ. ಬಿ, ಮೊಹಮ್ಮದ್ ಸಫ್ವಾನ್, ಅಲಿ ಅಫ್ತಾಬ್, 9 ತರಗತಿಯ ಮೊಹಮ್ಮದ ರೈಫ್ , ಅಹಸಾನ್ ವದೂದ್, ಭಾಗವಹಿಸಿದ್ದರು. 

ಸವ್ಯಸಾಚಿ ಆಟಗಾರರಾಗಿ 10ನೇ ತರಗತಿಯ ಅನೂಪ್ ಮತ್ತು ಐಮನ್ ಶಾಫಿ ಆಯ್ಕೆಯಾಗಿದ್ದಾರೆ. ಇವರಿಗೆ ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕರು, ರಾಷ್ಟ್ರಮಟ್ಟದ ತ್ರೋ ಬಾಲ್ ಆಟಗಾರರಾದ  ಗೋಪಿನಾಥ್ ಹಾಗೂ ದೈಹಿಕ ಶಿಕ್ಷಣ ಶಿಕ್ಷಕಿ ರಂಜಿನಿ ತರಬೇತಿ ನೀಡಿರುತ್ತಾರೆ ಎಂದು ಸಂಸ್ಥೆಯ ಮುಖ್ಯಸ್ಥರು ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here