ಗೋಳಿತ್ತೊಟ್ಟು: ಭಜನಾ ತರಬೇತಿ ಉದ್ಘಾಟನೆ

0

ನೆಲ್ಯಾಡಿ: ಶ್ರೀ ಸಿದ್ಧಿವಿನಾಯಕ ಭಜನಾ ಮಂಡಳಿ ವಿನಾಯಕಬೆಟ್ಟ ಗೋಳಿತ್ತೊಟ್ಟು ಇದರ ಆಶ್ರಯದಲ್ಲಿ ಗೋಳಿತ್ತೊಟ್ಟು ಭಜನಾ ಮಂದಿರದಲ್ಲಿ ಭಜನಾ ತರಬೇತಿ ಆರಂಭಗೊಂಡಿತು.

ವಿಶ್ವ ಹಿಂದೂ ಪರಿಷತ್ ಕರ್ನಾಟಕ ದಕ್ಷಿಣ ಪ್ರಾಂತ ಧರ್ಮ ಪ್ರಸರಣ ಪ್ರಮುಖ್ ಕೃಷ್ಣಮೂರ್ತಿ ಬೆಂಗಳೂರುರವರು ತರಬೇತಿ ಶಿಬಿರ ಉದ್ಘಾಟಿಸಿದರು. ವಿಶ್ವ ಹಿಂದೂ ಪರಿಷತ್ ಪುತ್ತೂರು ಜಿಲ್ಲೆ ಉಪಾಧ್ಯಕ್ಷ ಭಾಸ್ಕರ ಧರ್ಮಸ್ಥಳ, ಜಿಲ್ಲಾ ಸಹ ಕಾರ್ಯದರ್ಶಿ ನವೀನ್ ನೆರಿಯ, ಅಯೋಧ್ಯಾನಗರ ಶ್ರೀರಾಮ ಭಜನಾ ಮಂಡಳಿ ಅಧ್ಯಕ್ಷ, ಭಜನಾ ತರಬೇತಿದಾರರೂ ಆದ ಗಂಗಾಧರ ಪರಂದಾಜೆ ಶುಭಹಾರೈಸಿದರು. ಆಲಂತಾಯ ಶಿವಾರು ಶ್ರೀ ರಾಜನ್ ದೇವಿ ಭಜನಾ ಮಂಡಳಿಯ ವೇದಾವತಿ ಶಿವಾರು, ಗೋಳಿತ್ತೊಟ್ಟು ಶ್ರೀ ಸಿದ್ಧಿವಿನಾಯಕ ಭಜನಾ ಮಂಡಳಿ ಅಧ್ಯಕ್ಷ ವಿಶ್ವನಾಥ ನೆಕ್ಕರೆ, ಗೋಳಿತ್ತೊಟ್ಟು ಶ್ರೀ ಸಿದ್ಧಿವಿನಾಯಕ ಸೇವಾ ಸಮಿತಿ ಅಧ್ಯಕ್ಷ ಬಾಲಕೃಷ್ಣ ಅಲೆಕ್ಕಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here