ನಿಡ್ಪಳ್ಳಿ; ಸ್ಥಳೀಯ ಯುವಕರಿಂದ ಮುಂಡೂರು-ದೇವಸ್ಯ ರಸ್ತೆ ದುರಸ್ಥಿ

0

ನಿಡ್ಪಳ್ಳಿ; ಇಲ್ಲಿಯ ಶ್ರೀ ಶಾಂತದುರ್ಗಾ ದೇವಸ್ಥಾನದಿಂದ ಮುಂದೆ ಮುಂಡೂರು ದೇವಸ್ಯ ರಸ್ತೆಯನ್ನು ಗ್ರಾಮ ಪಂಚಾಯತ್ ಸದಸ್ಯ ಮುರಳೀಕೃಷ್ಣ ಮುಂಡೂರು ಇವರ ನೇತೃತ್ವದಲ್ಲಿ ಸ್ಥಳೀಯ ಯುವಕರಿಂದ ಸೆ.12 ರಂದು ದುರಸ್ಥಿಗೊಳಿಸಲಾಯಿತು.
ಕೂಟೇಲು ಸೇತುವೆ ಕಾಮಗಾರಿ ಆರಂಭವಾದ ನಂತರ ರೆಂಜ ಸಂಪರ್ಕ ಕಲ್ಪಿಸಲು ಇದ್ದ ಬದಲಿ ರಸ್ತೆ ಇದಾಗಿದ್ದು ವಾಹನ ಸಂಚಾರದ ಒತ್ತಡದಿಂದ ರಸ್ತೆ ತೀರಾ ಹದಗೆಟ್ಟಿದ್ದು ಸಾರ್ವಜನಿಕರಿಗೆ ತುಂಬಾ ಸಮಸ್ಯೆಯಾಗಿತ್ತು.ಆದುದರಿಂದ ಕೆಸರುಮಯವಾಗಿದ್ದ ಈ ರಸ್ತೆಯನ್ನು ಸ್ಥಳೀಯ ಯುವಕರ ನೆರವಿನಿಂದ ವಾಹನದಲ್ಲಿ ಜಲ್ಲಿ ತಂದು ಹಾಕಿ ದುರಸ್ಥಿಗೊಳಿಸಿದರು.

LEAVE A REPLY

Please enter your comment!
Please enter your name here