ಅಲಂಕಾರು ಮತ್ತು ಕಡಬ ಸಹಕಾರ ಸಂಘದ ನಿವೃತ್ತ ಸಿಇಓ ಗಳಿಗೆ ಸನ್ಮಾನ

0

ಪುತ್ತೂರು: ಇಲ್ಲಿನ  ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ 20 ಅಂಶಗಳ ಸಭೆಯಲ್ಲಿ ಸುಮಾರು 39 ವರ್ಷಗಳ ಕಾಲ ಅಲಂಕಾರು ಸಹಕಾರ ಸಂಘದಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಸಿಇಓ ಶ್ರೀ ಪ್ರಶಾಂತ್ ರೈ ಮನವಳಿಕೆ ಹಾಗೂ ಕಡಬ ಸಹಕಾರ ಸಂಘದಲ್ಲಿ ವಿವಿಧ ಹುದ್ದೆಗಳಲ್ಲಿ ಸುಮಾರು 40 ವರ್ಷ ಸೇವೆ ಸಲ್ಲಿಸಿ ನಿವೃತ್ತರಾದ ಸಿಇಓ  ಚಾಕೊ ರವರಿಗೆ ಸನ್ಮಾನ ಕಾರ್ಯಕ್ರಮ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಸಭಾಂಗಣದಲ್ಲಿ ನಡೆಯಿತು.

ಈ ಕಾರ್ಯಕ್ರಮದ ಸಭಾದ್ಯಕ್ಷತೆಯನ್ನು ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕರಾದ  ಶಶಿಕುಮಾರ್ ರೈ ಬಾಲ್ಯೊಟ್ಟು ವಹಿಸಿ,  ಪ್ರಶಾಂತ್ ರೈ ಮತ್ತು ಚಾಕೊ ರವರನ್ನು ಶಾಲು, ಹೊದಿಸಿ ಫಲಪುಷ್ಪಗಳೊಂದಿಗೆ ಸ್ಮರಣಿಕೆ ನೀಡಿ ಗೌರವಿಸಿ ನಿವೃತ್ತರ ಕಾರ್ಯವೈಖರಿಯನ್ನು ಅಭಿನಂದಿಸಿ ಶುಭಹಾರೈಸಿದರು.

ಮುಖ್ಯ ಅತಿಥಿಯಾದ ಪುತ್ತೂರು ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಂಧಕರಾದ ತ್ರಿವೇಣಿ ರವರು ನಿವೃತ್ತರ ಸೇವೆಯನ್ನು ಕೊಂಡಾಡಿ ಶುಭ ಹಾರೈಸಿದರು. ಪುತ್ತೂರು ಶಾಖೆಯ ವ್ಯವಸ್ಥಾಪಕರಾದ ರತ್ನಕುಮಾರ್, ಸಹಕಾರಿ ಅಬಿವೃದ್ದಿ ಅಧಿಕಾರಿ  ಶೋಭಾ, ಡಿಸಿಸಿ ಬ್ಯಾಂಕ್ ಮಂಗಳೂರು ಇದರ ಐಟಿ ವಿಭಾಗದ ಮುಖ್ಯಸ್ಥರಾದ ಸುನಿಲ್ ಮತ್ತು  ಜೋಷಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸನ್ಮಾನಿತರು ತಮ್ಮ ಸೇವಾವಧಿಯಲ್ಲಿ ಸಹಕರಿಸಿದ ಎಲ್ಲರನ್ನು ಸ್ಮರಿಸಿಕೊಂಡು ಕೃತಜ್ಞತೆ ಸಲ್ಲಿಸಿದರು. ಅಲಂಕಾರು ಸಹಕಾರ ಸಂಘದ ನೂತನ ಸಿಇಓ ಪದ್ಮಪ್ಪ ಗೌಡ ಮತ್ತು ಕಡಬದ ನೂತನ ಸಿಇಓ  ಬಾಲಕೃಷ್ಣ ರವರನ್ನು ಸಭಾದ್ಯಕ್ಷರು ಹೂಗುಚ್ಚ ನೀಡಿ ಗೌರವಿಸಿದರು.

ನೆಲ್ಯಾಡಿಯ ಸಿಇಓ  ದಯಾಕರ್ ರೈ ಮತ್ತು ಚಾರ್ವಕದ ಸಿಇಓ ಅಶೋಕ್ ಗೌಡ ರವರು ಸನ್ಮಾನಿತರಿಗೆ ಶುಭ ಹಾರೈಸಿದರು.
ಈ ಸಮಾರಂಭದಲ್ಲಿ ವಲಯ ಮೇಲ್ವಿಚಾರಕರಾದ  ವಸಂತ ಎಸ್. ಮತ್ತು  ಶರತ್ ,  ದೀಕ್ಷಿತ್ ಹಾಗೂ ಪುತ್ತೂರು ತಾಲೂಕಿನ ಸಹಕಾರ ಸಂಘಗಳ ಮುಖ್ಯಕಾರ್ಯನಿರ್ವಹಣಾಧಿಕಾರಿಗಳಾದ ಮುಂಡೂರಿನ ಜಯಪ್ರಕಾಶ ರೈ, ಬನ್ನೂರಿನ ಗೋಪಾಲಕೃಷ್ಣ ಭಟ್ , ನರಿಮೊಗರಿನ ಮಧುಕರ್ , ಕಾವು ಸಂಘದ ಕೇಶವ ಮೂರ್ತಿ, ಕೊಳ್ತಿಗೆಯ  ಹಂಸಾವತಿ , ಬಲ್ನಾಡಿನ ಸೀತಾರಾಮ ಗೌಡ , ಆರ್ಯಾಪು  ಜಯಂತಿ , ಉಪ್ಪಿನಂಗಡಿಯ  ಕ್ಲೇರಿ ವೇಗಸ್ , ಪಾಣಾಜೆಯ ಲಕ್ಷ್ಮಣ ನಾಯ್ಕ್ , ಬಿಳಿನೆಲೆಯ ಸುಜಾತ, ಕುಂಬ್ರದ  ಭವಾನಿ ಬಿ.ಆರ್, ಹೊಸಮಠದ ಸೋಮಸುಂದರ್ ಶೆಟ್ಟಿ, ಕೆದಂಬಾಡಿಯ ವಿನಯ ರೈ ಉಪಸ್ಥಿತರಿದ್ದರು.

ಸವಣೂರಿನ ಸಿಇಓ  ಚಂದ್ರಶೇಖರ್ ಕಾರ್ಯಕ್ರಮ ನಿರ್ವಹಿಸಿ , ಬೆಟ್ಟಂಪಾಡಿ ಸಹಕಾರ ಸಂಘದ  ರಾಮಯ್ಯ ರವರು ವಂದಿಸಿದರು.

LEAVE A REPLY

Please enter your comment!
Please enter your name here