ಪುತ್ತೂರು ವಲಯ ಮಟ್ಟದ ಕಬಡ್ಡಿ ಪಂದ್ಯಾಟ; ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಬಾಲಕರ ತಂಡ ದ್ವಿತೀಯ

0

ಪುತ್ತೂರು: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಪುತ್ತೂರು ಮತ್ತು ಮೊರಾಜಿದೇಸಾಯಿ ಶಾಲೆ, ಬಲ್ನಾಡು ಇದರ ಆಶ್ರಯದಲ್ಲಿ ಸೆ. 9ರಂದು ನಡೆದ ಪುತ್ತೂರು ವಲಯ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಬಾಲಕರ ತಂಡವು ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದೆ.

ತಂಡದಲ್ಲಿ ಮೋಕ್ಷಿತ್(ನೇರಳಕಟ್ಟೆ ನಿವಾಸಿ  ಜಗದೀಶ್ ಮತ್ತು ಪ್ರೇಮಇವರ ಪುತ್ರ), ಪ್ರೀತಮ್(ಮಿತ್ತೂರು ನಿವಾಸಿ ಜಯಂತಗೌಡ ಮತ್ತು ಲೀಲಾವತಿಇವರ ಪುತ್ರ), ರಿತೇಶ್(ಕಬಕ ನಿವಾಸಿ ವೆಂಕಪ್ಪ ಮತ್ತು ವೀಣಇವರ ಪುತ್ರ), ತ್ರಿಜಲ್(ಕೈಕಾರ ನಿವಾಸಿ  ವಿನೋದ್ ಮತ್ತು ಶರಿಕಇವರ ಪುತ್ರ), ಎಂ.ಪ್ರಣಾಮ್ (ಮಿನಾವು ನಿವಾಸಿ  ಕೇಶವ ಮತ್ತು ಶುಭಶ್ರೀ ಇವರ ಪುತ್ರ), ಧನ್ವಿತ್.ಎಂ(ಬಲ್ನಾಡು ನಿವಾಸಿ  ಕೆ.ಮಾಧವಗೌಡ ಮತ್ತುಯಶೋಧಇವರ ಪುತ್ರ),ವೈಶಾಖ್(ಬುಳ್ಳೇರಿಕಟ್ಟೆ ನಿವಾಸಿ  ಗಣೇಶ್‌ಎಮ್ ಮತ್ತು ಸರಸ್ವತಿ.ಪಿ ಇವರ ಪುತ್ರ), ಚಿನ್ಮಯ್(ಒಳತ್ತಡ್ಕ ನಿವಾಸಿ ಸೇಸಪ್ಪ ಮತ್ತುಚಂದ್ರಿಕಾಇವರ ಪುತ್ರ), ನಮನ್( ದಯಾನಂದಗೌಡ ಮತ್ತು ವಿಮಲಾ ಇವರ ಪುತ್ರ), ತನುಷ್( ಪಾಂಡುರಂಗ.ಕೆ ಮತ್ತು ಕುಸುಮ.ಕೆ ಇವರ ಪುತ್ರ) ತೃತೇಶ್(ಅಶೋಕ್.ಬಿ.ಬಿ ಮತ್ತು ಪೂರ್ಣಿಮಾಇವರ ಪುತ್ರ) ಮತ್ತುನಿವೇದ್(ಶ್ರೀ ರಾಜೇಶ್ ಮತ್ತು ಅಶ್ವಿನಿ ಇವರ ಪುತ್ರ) ಇದ್ದು, ರಿತೇಶ್ ಪಂದ್ಯಾಟದಉತ್ತಮ ದಾಳಿಗಾರ ಪ್ರಶಸ್ತಿಯನ್ನು ಪಡೆದುಕೊಂಡಿದ್ದು, ತಂಡವು ಸರಕಾರಿಉನ್ನತ ಹಿರಿಯ ಪ್ರಾಥಮಿಕ ಶಾಲೆ, ಕುದ್ಮಾರುಇಲ್ಲಿ ನಡೆಯುವತಾಲೂಕು ಮಟ್ಟದ ಪಂದ್ಯಾಟಕ್ಕೆಆಯ್ಕೆಯಾಗಿರುತ್ತದೆಎಂದು ಶಾಲಾ ಮುಖ್ಯೋಪಾಧ್ಯಾಯರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here