ಆಲಂಕಾರು ಶ್ರೀ ದುರ್ಗಾಂಬಾ ಕಲಾ ಸಂಗಮದ ಸದಸ್ಯರಿಂದ ಯಕ್ಷಗಾನ ತಾಳಮದ್ದಳೆ

0

ಕಡಬ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರ ಶ್ರೀ ಸಂಪುಟ ನರಸಿಂಹ ಮಠದ ಪೀಠಾಧಿಪತಿಗಳಾದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರ ಚಾತುರ್ಮಾಸ್ಯದ ಸಂದರ್ಭ ಶ್ರೀ ಮಠದ ಸಾಂಸ್ಕೃತಿಕ ವೇದಿಕೆಯಲ್ಲಿ ಆಲಂಕಾರು ಶ್ರೀ ಕ್ಷೇತ್ರ ಶರವೂರು ಶ್ರೀ ದುರ್ಗಾಂಬಾ ಕಲಾ ಸಂಗಮದ ಸದಸ್ಯರಿಂದ ಭಕ್ತ ಮಯೂರ ಧ್ವಜ ಯಕ್ಷಗಾನ ತಾಳಮದ್ದಳೆ ನಡೆಯಿತು.

ಹಿಮ್ಮೇಳದಲ್ಲಿ ಗೋಪಾಲಕೃಷ್ಣ ಭಟ್ ನೈಮಿಷ, ಡಿ.ಕೆ.ಆಚಾರ್ಯ, ಮೋಹನ ಶರವೂರು, ಶ್ರೀಹರಿ ನಗ್ರಿ, ಅರ್ಥಧಾರಿಗಳಾಗಿ ಗಣರಾಜ ಕುಂಬ್ಳೆ, ಕೆ.ಸುಬ್ರಹ್ಮಣ್ಯ ರಾವ್, ಚಂದ್ರಶೇಖರ ಆಲಂಕಾರು, ಟಿ.ರಾಘವೇಂದ್ರ ಪ್ರಸಾದ್ ಭಟ್, ದಿವಾಕರ ಆಚಾರ್ಯ ಹಳೆನೇರೆಂಕಿ, ಟಿ.ನಾರಾಯಣ ಭಟ್, ವಿಶ್ವನಾಥ ಶರವೂರು ಕಲಾವಿದರಾಗಿ ಸಹಕರಿಸಿದರು. ಸ್ವಾಮೀಜಿಯವರು ಕಲಾವಿದರಿಂದ ಶಾಲುಹೊದಿಸಿ ಫಲ ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು. ಯಜ್ಞೇಶ ಆಚಾರ್ಯ ಸಹಕರಿಸಿದರು.

LEAVE A REPLY

Please enter your comment!
Please enter your name here