ಕಡಬ: ವಿಕಲಚೇತನ ಗುರುತು ಚೀಟಿ ನವೀಕರಣ ಶಿಬಿರ

0

ಕಡಬ: ತಾಲೂಕಿನ ದಿವ್ಯಾಂಗರ ಹೊಸದಾಗಿ ಗುರುತಿನ ಚೀಟಿ ಮತ್ತು ನವೀಕರಣ ಮಾಡುವ ವಿಶೇಷ ಶಿಬಿರ ಕಡಬ ಸಮುದಾಯ ಆರೋಗ್ಯ ಕೇಂದ್ರದ ವೈದ್ಯೆ ಡಾ. ಸುಚಿತ್ರಾ ಕೆ. ಆರ್. ರಾವ್‌ರವರ ನಿರ್ದೇಶನದಲ್ಲಿ ಸೆ.14ರಂದು ಕಡಬ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಡೆಯಿತು.

ಕಡಬ ತಾಲೂಕಿನ ಎಲ್ಲಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಸುಮಾರು 65 ವಿಕಲಚೇತನರ ಗುರುತಿನ ಚೀಟಿ ನವೀಕರಣ ಮಾಡಲು ಬಾಕಿ ಇದ್ದ ಇವರು ಈ ಶಿಬಿರದ ಸದುಪಯೋಗ ಪಡೆದುಕೊಂಡರು. ವಿಶೇಷ ಶಿಬಿರದಲ್ಲಿ ಮಾನಸಿಕ ತಜ್ಞರು, ವೈದ್ಯಕೀಯ ತಜ್ಞರು, ಮಕ್ಕಳ ತಜ್ಞರು, ಕಿವಿ ಮೂಗು ಗಂಟಲು ತಜ್ಞರು, ಮೂಳೆ ತಜ್ಞರು, ಕಣ್ಣಿನ ತಜ್ಞರು ತಪಾಸಣೆ ನಡೆಸಿದರು. ಕಡಬ ತಾಲೂಕಿನ ವಿವಿದ್ದೋದ್ದೇಶ ಪುನರ್ವಸತಿ ಕಾರ್ಯಕರ್ತರಾದ ಅಕ್ಷತಾ ಹಾಗೂ ಗ್ರಾಮ ಪಂಚಾಯತ್‌ಗಳಲ್ಲಿ ಕಾರ್ಯನಿರ್ವಹಿಸುವ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು ಸಹಕರಿಸಿದರು.

LEAVE A REPLY

Please enter your comment!
Please enter your name here