ಸೆ.17: ಬೀರಮಲೆ ಶ್ರೀ ವಿಶ್ವಕರ್ಮ ಮಂದಿರದಲ್ಲಿ 60ನೇ ವರ್ಷದ ಶ್ರೀ ವಿಶ್ವಕರ್ಮ ಪೂಜೆ

0

ಪುತ್ತೂರು: ಶ್ರೀ ವಿಶ್ವಕರ್ಮ ಸಮಾಜ ಸಭಾ ಟ್ರಸ್ಟ್ ಬೀರಮಲೆ ಪುತ್ತೂರು ಇದರ ವತಿಯಿಂದ ಸೆ.17ರಂದು ಬೀರಮಲೆ ಶ್ರೀ ವಿಶ್ವಕರ್ಮ ಮಂದಿರದಲ್ಲಿ 60ನೇ ವರ್ಷದ ಶ್ರೀ ವಿಶ್ವಕರ್ಮ ಪೂಜೆ ಜರುಗಲಿದೆ.

ಬ್ರಹ್ಮಶ್ರೀ ಪುರೋಹಿತ ನೆಟ್ಟಣಿಗೆ ಉದಯ ಶಂಕರ ಆಚಾರ್ಯ ಮತ್ತು ಬ್ರಹ್ಮಶ್ರೀ ಪುರೋಹಿತ ಕೇಶವ ಆಚಾರ್ಯ ಕಡಬ ಅವರ ಆಚಾರ್ಯತ್ವದಲ್ಲಿ ಪೂಜಾ ಕಾರ್ಯಕ್ರಮ ನಡೆಯಲಿದೆ. ಬೆಳಿಗ್ಗೆ ಗಣಪತಿ ಹವನ, ಪ್ರಾರ್ಥನೆ, ಗಂಗಾಪೂಜೆ ಕಲಶ ಪ್ರತಿಷ್ಠೆ, ಗುರು ಗಣಪತಿ ಪೂಜೆ, ನವಗ್ರಹ ಪೂಜೆ, ಗೋತ್ರ ಪ್ರವರ್ತಕ ಪಂಚ ಋಷಿ ಸಹಿತ ಶ್ರೀ ವಿಶ್ವಕರ್ಮ ಪ್ರಧಾನ ಹೋಮ ಜಯಾಧ್ಯಾಧಿ ಪೂರ್ಣಾಹುತಿ, ಮಹಾಪೂಜೆ, ಮಂಗಳಾರತಿ ನಡೆಯಲಿದೆ. ಬಳಿಕ ಅನ್ನಪ್ರಸಾದ ಜರುಗಲಿದೆ ಎಂದು ಶ್ರೀ ವಿಶ್ವಕರ್ಮ ಸಮಾಜ ಸಭಾ ಟ್ರಸ್ಟ್‌ನ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here