ವಿಟ್ಲ: ಅನಾರೋಗ್ಯದಿಂದ ಯುವಕ ಮೃತ್ಯು

0

ವಿಟ್ಲ: ಅನಾರೋಗ್ಯದಿಂದಿದ್ದ ಯುವಕರೋರ್ವರು ಚಿಕಿತ್ಸೆಗೆ ಸ್ಪಂಧಿಸದೆ ಮೃತಪಟ್ಟ ಘಟನೆ ವಿಟ್ಲದಲ್ಲಿ ನಡೆದಿದೆ. ವಿಟ್ಲದ ಸಾಧನಾ ಬುಕ್ ಸ್ಟಾಲ್ ಮಾಲಕ, ಬೊಬ್ಬೆಕೇರಿ ನಿವಾಸಿ ಹಿಲಾರಿ ಮಸ್ಕರೇನಸ್ ರವರ ಪುತ್ರ ನಿರೂಪ್ ಮಸ್ಕರೇನಸ್(38 ವ.)ರವರು ಮೃತ ದುರ್ದೈವಿ ಯುವಕ.

ಕೆಲ ಸಮಯದಿಂದ ಅನಾರೋಗ್ಯದಿಂದಿದ್ದ ನಿರೂಪ್ ಮಸ್ಕರೇನಸ್ ರವರನ್ನು ಕೆಲದಿನಗಳ ಹಿಂದೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಲ್ಲಿ ಅವರು ಚಿಕಿತ್ಸೆಗೆ ಸ್ಪಂಧಿಸದೆ ಸೆ.15ರಂದು ನಿಧನರಾದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.

LEAVE A REPLY

Please enter your comment!
Please enter your name here