ಸೆ.17: ಮಣಿಕರ ಶಾಲಾ ನೂತನ ತರಗತಿ ಕೊಠಡಿಗಳ ಉದ್ಘಾಟನೆ

0

  • ಡಿ.ವಿ.ಸದಾನಂದ ಗೌಡ ರ ಸದಾಸ್ಮಿತ ಫೌಂಡೇಶನ್‌,ಸಂತೋಷ್‌ ಕುಮಾರ್‌ ರೈ ನಳೀಲು ಅವರು ಕೊಡುಗೆ ನೀಡಿದ ಕೊಠಡಿಗಳು

ಪುತ್ತೂರು : ಕೊಳ್ತಿಗೆ ಗ್ರಾಮದ ಮಣಿಕರ ಹಿ.ಪ್ರಾ.ಶಾಲೆಗೆ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಹಾಗೂ ಶಾಲಾ ಹಿರಿಯ ವಿದ್ಯಾರ್ಥಿ,ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮೊಕ್ತೇಸರ ಪುತ್ತೂರಿನ ಕುಂಕುಮ್ ಎಸೋಸಿಯೇಟ್ಸ್ ನ ಪ್ರವರ್ತಕ ಸಂತೋಷ್‌ ಕುಮಾರ್‌ ರೈ ನಳೀಲು ಅವರು ಕೊಡುಗೆಯಾಗಿ ನೀಡಲ್ಪಟ್ಟ  ನೂತನ ತರಗತಿ ಕೊಠಡಿಗಳ ಉದ್ಘಾಟನಾ ಸಮಾರಂಭ ಸೆ.17ರಂದು ಪೂರ್ವಾಹ್ನ 11 ಗಂಟೆಗೆ ನಡೆಯಲಿದೆ.

ಕೊಠಡಿ 1ನ್ನು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಮತ್ತು ಕೊಠಡಿ ೨ನ್ನು ಪುತ್ತೂರು ಶಾಸಕ ಸಂಜೀವ ಮಠಂದೂರು ಅವರು ಉದ್ಘಾಟಿಸುವರು.

ಅಧ್ಯಕ್ಷತೆಯನ್ನು ಕೊಳ್ತಿಗೆ ಗ್ರಾ.ಪಂ.ಅಧ್ಯಕ್ಷ ಶ್ಯಾಮಸುಂದರ ರೈ ವಹಿಸುವರು.ದೀಪ ಪ್ರಜ್ವಲನೆಯನ್ನು ಮಣಿಕರ ಶಾಲಾ ಸ್ಥಾಪಕಾಧ್ಯಕ್ಷ ನಾರಾಯಣ ರೈ ಪಟೇಲ್‌ ನೆರವೇರಿಸುವರು.ಅತಿಥಿಗಳಾಗಿ ಕೊಳ್ತಿಗೆ ಗ್ರಾ.ಪಂ.ಸದಸ್ಯರಾದ ಸುಂದರ,ಶುಭಲತಾ ,ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್‌ ಎಸ್.ಆರ್.‌, ಮಾಜಿ ಶಾಸಕಿ ಶಕುಂತಳಾ ಟಿ.ಶೆಟ್ಟಿ,ಸದಾಸ್ಮಿತ ಫೌಂಡೇಶನ್‌ ಕಾರ್ಯಾಧ್ಯಕ್ಷ ಕಾರ್ತಿಕ್‌ ಡಿ.ಎಸ್.‌,ರೈ ಎಸ್ಟೇಟ್‌ ಎಜುಕೇಶನಲ್‌ & ಚಾರಿಟೇಬಲ್‌ ಟ್ರಸ್ಟ್‌ನ ಪ್ರವರ್ತಕ ಅಶೋಕ್‌ ಕುಮಾರ್‌ ರೈ ಕೆ.ಎಸ್.‌, ಶಾಲಾ ಹಿರಿಯ ವಿದ್ಯಾರ್ಥಿ,ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮೊಕ್ತೇಸರ ಪುತ್ತೂರಿನ ಕುಂಕುಮ್ ಎಸೋಸಿಯೇಟ್ಸ್ ನ ಪ್ರವರ್ತಕ ಸಂತೋಷ್‌ ಕುಮಾರ್‌ ರೈ ನಳೀಲು, ಮಣಿಕ್ಕರ ಸರಕಾರಿ ಪ್ರೌಢಶಾಲೆಯ ಕಾರ್ಯಾಧ್ಯಕ್ಷ ಸುನೀಲ್‌ ಕುಮಾರ್‌ ರೈ ಅವರು ಪಾಲ್ಗೊಳ್ಳುವರು ಎಂದು ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಅಬ್ದುಲ್‌ ರಹೀಂ,ಶಾಲಾ ಮುಖ್ಯಗುರು ವಿಶಾಲಾಕ್ಷಿ ಕೆ. ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here