ವಿನಾಯಕನಗರ ಶ್ರೀ ಸಿದ್ದಿವಿನಾಯಕ ಭಜನಾ ಮಂದಿರ ಆಡಳಿತ ಸಮಿತಿಗೆ ಆಯ್ಕೆ

0

ಗೌರವಾಧ್ಯಕ್ಷ: ನಾರಾಯಣ ಮನೋಳಿತ್ತಾಯ, ಅಧ್ಯಕ್ಷ ಕೃಷ್ಣಪ್ಪ ಕುಲಾಲ್, ಕಾರ್ಯದರ್ಶಿ ಹರೀಶ್ ಮಿತ್ತಡ್ಕ, ಕೋಶಾಧಿಕಾರಿ ಶ್ರೀಪ್ರಸಾದ್

 

ಬೆಟ್ಟಂಪಾಡಿ: ಇಲ್ಲಿನ ವಿನಾಯಕನಗರ ಶ್ರೀ ಸಿದ್ಧಿವಿ‌ನಾಯಕ ಭಜನಾ ಮಂದಿರದ ಆಡಳಿತ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ ಇತ್ತೀಚೆಗೆ ಮಂದಿರದಲ್ಲಿ ಸಮಿತಿಯ ಅಧ್ಯಕ್ಷ ದಿನೇಶ್ ಪಂಬೆಜಾಲುರವರ ಅಧ್ಯಕ್ಷತೆಯಲ್ಲಿ ನಡೆದ ಮಹಾಸಭೆಯಲ್ಲಿ ನಡೆಯಿತು.

ನಾರಾಯಣ ಮನೋಳಿತ್ತಾಯ    ಕೃಷ್ಣಪ್ಪ ಕುಲಾಲ್            ಹರೀಶ್ ಮಿತ್ತಡ್ಕ              ಶ್ರೀಪ್ರಸಾದ್

ಗೌರವಾಧ್ಯಕ್ಷರಾಗಿ ನಾರಾಯಣ ಮನೋಳಿತ್ತಾಯ ಕಾಜಿಮೂಲೆಯವರನ್ನು ಮರು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಈ ಹಿಂದಿನ ಸಾಲಿನಲ್ಲಿ ಉಪಾಧ್ಯಕ್ಷರಾಗಿದ್ದ ಕೃಷ್ಣಪ್ಪ ಕುಲಾಲ್ ಉಡ್ಡಂಗಳ, ಕಾರ್ಯದರ್ಶಿಯಾಗಿ ಹರೀಶ್ ಮಿತ್ತಡ್ಕ, ಕೋಶಾಧಿಕಾರಿಯಾಗಿ ಶ್ರೀಪ್ರಸಾದ್ ಅಡ್ಯೆತ್ತಿಮಾರ್ ಮರು ಆಯ್ಕೆಯಾದರು‌. ಉಪಾಧ್ಯಕ್ಷರಾಗಿ ಪ್ರೇಮಲತಾ ಜೆ. ರೈ ಆನಡ್ಕ, ಜೊತೆ ಕಾರ್ಯದರ್ಶಿಯಾಗಿ ರಕ್ಷಣ್ ಬೇಂಗತ್ತಡ್ಕರವರನ್ನು ಆಯ್ಕೆ ಮಾಡಲಾಯಿತು. ಗೌರವ ಸಲಹೆಗಾರರಾಗಿ ಸಾಂತಪ್ಪ ಗೌಡ ಪಂಬೆಜಾಲು, ರಾಮಯ್ಯ ರೈ ಕಕ್ಕೂರು, ಶಂಕರ ಪಾಟಾಳಿ ಕಕ್ಕೂರು ಹಾಗೂ ಜಯರಾಮ ಗಾಂಭೀರ ಮಡ್ಯಂಪಾಡಿ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕಿಶೋರ್ ಶೆಟ್ಟಿ ಕೋರ್ಮಂಡ, ಲಕ್ಷ್ಮೀಶ ರೈ, ಪುಷ್ಪರಾಜ್ ವಿನಾಯಕನಗರ, ಪುರಂದರ ಮಿತ್ತಡ್ಕ, ಲಕ್ಷ್ಮಿನಾರಾಯಣ ರೈ ಡೆಮ್ಮಂಗರ, ಗಣೇಶ್ ಪಂಬೆಜಾಲು, ಜಯಪ್ರಕಾಶ್ ಕಕ್ಕೂರು, ಸತ್ಯನಾರಾಯಣ ತಲೆಪ್ಪಾಡಿ, ಪಾರ್ವತಿ ಲಿಂಗಪ್ಪ ಗೌಡ, ಧನ್ಯ, ಶಶಿಧರ ಕಕ್ಕೂರು ಆಯ್ಕೆಯಾದರು.

LEAVE A REPLY

Please enter your comment!
Please enter your name here